



ಪಡುಬಿದ್ರೆ':
ಹೆಜಮಾಡಿ ಗ್ರಾಮದ ಅಲ್-ಅಝ್ಹರ್ ಆಂಗ್ಲ ಮಾಧ್ಯಮ ಶಾಲೆಯ ಬೀಗ ಮುರಿದು ಒಳನುಗ್ಗಿದ ಕಳ್ಳರು 79,020 ರೂ. ನಗದು ಕಳವು ಮಾಡಿಕೊಂಡು ಪರಾರಿಯಾಗಿರುವ ಘಟನೆ ನ. 9ರಂದು ಬೆಳಕಿಗೆ ಬಂದಿದೆ. ನ.8ರ ಸಂಜೆ 4.30ರಿಂದ ನ.9ರ ಬೆಳಿಗ್ಗೆ 7ಗಂಟೆಯ ಮಧ್ಯಾವಧಿಯಲ್ಲಿ ಶಾಲಾ ಕಛೇರಿಯ ಬಾಗಿಲಿನ ಬೀಗವನ್ನು ಮುರಿದು ಒಳ ನುಗ್ಗಿದ ಕಳ್ಳರು, ಶಾಲಾ ಕುರ್ಚಿ ಖರೀದಿಗೆಂದು ಇರಿಸಿದ್ದ 45 ಸಾವಿರ ರೂ., ಮಕ್ಕಳ ಶೈಕ್ಷಣಿಕ ಪ್ರವಾಸಕ್ಕೆಂದು ಸಂಗ್ರಹಿಸಿದ 11 ಸಾವಿರ ರೂ. ಮತ್ತು ಶಾಲಾ ಶುಲ್ಕದ ಬಾಬ್ತು ನಗದು 20,020 ರೂ. ಸೇರಿದಂತೆ ಒಟ್ಟು ರೂಪಾಯಿ 79,020/- ಹಣವನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.