



ಕಾರ್ಕಳ: ಓವರ್ ಟೇಕ್ ಮಾಡುವ ಭರದಲ್ಲಿ ಬಸ್ ಢಿಕ್ಕಿ ಹೊಡೆದು ಬೈಕ್ ಸವಾರ ಸಾವನ್ನಪ್ಪಿದ ಘಟನೆ ಕಾರ್ಕಳ ತಾಲೂಕಿನ ಶೃಂಗೇರಿ ಮಾಳ ರಾಷ್ಟಿçÃಯ ಹೆದ್ದಾರಿಯ ಓಟ ಹಳ್ಳ ಸೇತುವೆ ಬಳಿ ಎ.೬ ರಂದು ನಡೆದಿದೆ . ನಿತೇಶ್ (೨೩) ಮೃತಪಟ್ಟ ಬೈಕ್ ಸವಾರ . ನಿತೇಶ್ ತನ್ನ ಬೈಕ್ ನಲ್ಲಿ ಸಹ ಸವಾರ ನಂದೇಶ್ ನನ್ನು ಕುಳ್ಳಿಸಿಕೊಂಡು ಟಿಪ್ಪರನ್ನು ಓವರ್ ಟೇಕ್ ಮಾಡುವ ಭರದಲ್ಲಿ ಮಾಳದಿಂದ ಶೃಂಗೇರಿ ಕಡೆಗೆ ಹೋಗುತಿದ್ದ ಖಾಸಗಿ ಬಸ್ ಗೆ ಬೈಕ್ ಅಪ್ಪಳಿಸಿ ಬದಿಯಲ್ಲಿದ್ದ ಸಿಮೆಂಟ್ ಕಂಬಕ್ಕೆ ಹೊಡೆದ ಪರಿಣಾಮ ನಿತೇಶ್ ಸ್ಥಳದಲ್ಲೆ ಮೃತಪಟ್ಟಿದ್ದಾನೆ ಸಹಸವಾರ ಗಾಯಗೊಂಡಿದ್ದಾರೆ . ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.