logo
WhatsApp Image 2026-04-02 at 14.46.04.jpeg
hindalco everlast.jpeg

ಅ.3ರಂದು ಲಾರಿ, ಟೆಂಪೊ ಮಾಲಕ-ಚಾಲಕರಿಂದ ಉಡುಪಿ ಬಂದ್ ಗೆ ಕರೆ

ಟ್ರೆಂಡಿಂಗ್
share whatsappshare facebookshare telegram
30 Sept 2023
post image

ಉಡುಪಿ : ಮರಳು, ಕೆಂಪುಕಲ್ಲು, ಜಲ್ಲಿಕಲ್ಲು ಸೇರಿದಂತೆ ಕಟ್ಟಡ ನಿರ್ಮಾಣ ಸಾಮಗ್ರಿ ಸಾಗಿಸುವ ವಾಹನಗಳನ್ನು ಹಿಡಿದು ಪೊಲೀಸರು ಕೇಸು ಹಾಕುತ್ತಿರುವುದನ್ನು ಹಿನ್ನೆಲೆಯಲ್ಲಿ ಕೆಲವು ದಿನಗಳಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿರುವ ಲಾರಿ ಮತ್ತು ಟೆಂಪೊ ಮಾಲಕ-ಚಾಲಕರು ಅಕ್ಟೋಬರ್‌ 3ರಂದು ಉಡುಪಿ ಜಿಲ್ಲೆ ಬಂದ್‌ ನಡೆಸಲು ಕರೆನೀಡಿದ್ದಾರೆ.

ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಮತ್ತು ಎಸ್‌ಪಿ ಡಾ.ಅರುಣ್‌ ಜತೆ ಉಡುಪಿ ಜಿಲ್ಲೆ ಐವರು ಶಾಸಕರ ಉಪಸ್ಥಿತಿಯಲ್ಲಿ ಲಾರಿ ಮತ್ತು ಟೆಂಪೊ ಮಾಲಕರ ಸಂಘದವರು ಮಾತುಕತೆ ನಡೆಸಿದ್ದರೂ ಸಮಸ್ಯೆ ಇತ್ಯರ್ಥವಾಗಿಲ್ಲ. ಈ ಹಿನ್ನೆಲೆಯಲ್ಲಿ ಅ.3ರಂದು ಜಿಲ್ಲಾ ಬಂದ್‌ ನಡೆಸಲು ಲಾರಿ-ಟೆಂಪೊ ಮಾಲಕರ ಸಂಘದ ಒಕ್ಕೂಟದ 12 ವಲಯಗಳ ಪ್ರಮುಖರು ಸಭೆ ನಡೆಸಿ ಬಂದ್‌ ನಡೆಸಲು ತೀರ್ಮಾನಿಸಿದ್ದಾರೆ

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.