



ಸುಧಾರಿತ ವಿಶ್ಲೇಷಣಾತ್ಮಕ ರಸಾಯನಶಾಸ್ತ್ರ ಪ್ರಯೋಗಾಲಯವನ್ನು ಸ್ಥಾಪಿಸಲು ಭಾರತದ ಯುರೋಫಿನ್ಸ್ ಗ್ರೂಪ್ ಆಫ್ ಕಂಪೆನಿಯು ಬೆಂಗಳೂರಿನ ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದೊಂದಿಗೆ ಪಾಲುದಾರಿಕೆ ಮಾಡಿಕೊಂಡಿವೆ. ಪ್ರಯೋಗಾಲಯವು ಇತ್ತೀಚಿನ ಉಪಕರಣಗಳನ್ನು ಹೊಂದಿದ್ದು, ರಸಾಯನಶಾಸ್ತ್ರ ಸ್ನಾತಕೋತ್ತರ ಹಂತದ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಅನುಭವವನ್ನು ನೀಡುತ್ತದೆ. ಯುರೋಫಿನ್ಸ್ ಅಡ್ವಿನಸ್, ಯುರೋಫಿನ್ಸ್ ಅನಾಲಿಟಿಕಲ್ ಸರ್ವಿಸಸ್ ಮತ್ತು ಯುರೋಫಿನ್ಸ್ ಅಮರ್ ಇಮ್ಯೂನೊಡಯಾಗ್ನೋಸ್ಟಕ್ಸ್ ನ ಸಿಎಸ್ಆರ್ ಕಾರ್ಯಕ್ರಮದ ಅಡಿಯಲ್ಲಿ ಈ ಉಪಕ್ರಮವು ಮಾನವ ಬಂಡವಾಳವನ್ನು ಅಭಿವೃದ್ದಿಪಡಿಸುವ ಮೂಲಕ ಭಾರತದ ಆತ್ಮ ನಿರ್ಭರ ಕಾರ್ಯಕ್ರಮವನ್ನು ಬೆಂಬಲಿಸುವ ಯುರೋಫಿನ್ಸ್ ಸಂಸ್ಥೆಯ ಬದ್ಧತೆಯ ಒಂದು ಭಾಗವಾಗಿದೆ.
ಲ್ಯಾಬ್ ನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಭಾರತದ ಯುರೋಫಿನ್ಸ್ ಗ್ರೂಪ್ ಆಫ್ ಕಂಪೆನಿಗಳ ಪ್ರಾದೇಶಿಕ ನಿರ್ದೇಶಕ ನೀರಜ್ ಗರ್ಗ್, "ಔಷಧ ವಲಯದ ಕಸ್ಟಮ್ ಸಂಶೋಧನೆ, ಅಭಿವೃದ್ಧಿ ಸೇವೆಗಳಲ್ಲಿ ಹಾಗೂ ಭಾರತದಲ್ಲಿ ಆಹಾರ ಪರೀಕ್ಷೆಯಲ್ಲಿ ಮುಂಚೂಣಿಯಲ್ಲಿರುವ ಯುರೋಫಿನ್ಸ್ ರಸಾಯನಶಾಸ್ತ್ರ ವಿದ್ಯಾರ್ಥಿಗಳ ತರಬೇತಿ ಮತ್ತು ಅಭಿವೃದ್ಧಿಯನ್ನು ಬೆಂಬಲಿಸುತ್ತಿದ್ದಾರೆ. ದೇಶದಲ್ಲಿ ಪರೀಕ್ಷೆ ಮತ್ತು ಆರ್ & ಡಿ ಮೂಲಸೌಕರ್ಯವನ್ನು ವಿಸ್ತರಿಸಲು ಇದು ಪ್ರಮುಖ ಉಪಕ್ರಮವಾಗಿದೆ", ಎಂದರು. ಸೈಂಟ್ ಜೋಸೆಫ್ಸ್ ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದ ರೆ|ವಿಕ್ಟರ್ ಲೋಬೊ ಎಸ್ ಜೆ ಇವರು, "ಭಾರತದ ಯುರೋಫಿನ್ಸ್ ಕಂಪನಿ ಹಾಗೂ ಸೈಂಟ್ ಜೋಸೆಫ್ಸ್ ವಿಶ್ವವಿದ್ಯಾಲಯದ ನಡುವಿನ ಈ ಬಹು ವರ್ಷದ ಪಾಲುದಾರಿಕೆಯಿಂದ ನಾವು ತುಂಬಾ ಉತ್ಸುಕರಾಗಿದ್ದೇವೆ. ಏಕೆಂದರೆ ಸಾಮಾನ್ಯವಾಗಿ ಯುರೋಫಿನ್ಸ್ ನಂತಹ ಕಂಪನಿಗಳ ಉನ್ನತ ಮಟ್ಟದ ವಾಣಿಜ್ಯ ಪ್ರಯೋಗಾಲಯಗಳಲ್ಲಿ ಮಾತ್ರ ಲಭ್ಯವಿರುವ ಸುಧಾರಿತ ಸಾಧನಗಳನ್ನು ಕಲಿಯಲು ನಮ್ಮ ವಿದ್ಯಾರ್ಥಿಗಳಿಗೆ ಅನುವು ಮಾಡಿಕೊಡುತ್ತದೆ".
ಭಾರತದಲ್ಲಿನ ಯುರೋಫಿನ್ಸ್ ಕಂಪೆನಿಯು ದೇಶದಲ್ಲಿ ಪ್ರತಿಭೆಯನ್ನು ಅಭಿವೃದ್ಧಿಪಡಿಸಲು ಶೈಕ್ಷಣಿಕ ಸಂಸ್ಥೆಗಳೊಂದಿಗೆ ಕಾರ್ಯನಿರ್ವಹಿಸುತ್ತಿದೆ ಮತ್ತು ಕಂಪೆನಿಗಳ ಸಿಎಸ್ಆರ್ ಕಾರ್ಯಕ್ರಮದ ಅಡಿಯಲ್ಲಿ ಈ ಅನುದಾನವು ಆರ್ & ಡಿ ಹಾಗೂ ಪರೀಕ್ಷೆಯನ್ನು ಬೆಂಬಲಿಸಲು ಉದ್ಯಮ ಸಿದ್ದ, ಹೆಚ್ಚು ತರಬೇತಿ ಪಡೆದ ವಿಶ್ಲೇಷಣಾತ್ಮಕ ರಸಾಯನ ಶಾಸ್ತ್ರತಜ್ಞರನ್ನು ಅಭಿವೃದ್ಧಿಪಡಿಸಲು ಪ್ರಮುಖ ಉತ್ತೇಜನವನ್ನು ನೀಡುತ್ತದೆ. ಉದ್ಘಾಟನಾ ಸಮಾರಂಭದಲ್ಲಿ ಯುರೋಫಿನ್ಸ್ ಅಡ್ವಿನಸ್ ವ್ಯವಸ್ಥಾಪಕ ನಿರ್ದೇಶಕ ಶ್ರೀ ರಾಜೀವ್ ಮಲಿಕ್ ಹಾಗೂ ಯುರೋಫಿನ್ಸ್ ವಿಶ್ಲೇಷಣಾತ್ಮಕ ಸೇವೆಗಳ ವ್ಯವಸ್ಥಾಪಕ ನಿರ್ದೇಶಕ ಶ್ರೀ ಪಂಕಜ್ ಜೈಮಿನಿ ಅವರೊಂದಿಗೆ ಪ್ರೊ ಚಾನ್ಸಲರ್ ರೆ|ಸ್ಟೀಬರ್ಟ್ ಡಿಸಿಲ್ಟಾ ಎಸ್ ಜೆ ಮತ್ತು ಉಪಕುಲಪತಿ ರೆ|ವಿಕ್ಟರ್ ಲೋಬೊ ಎಸ್ ಜೆ ಮತ್ತು ಬೆಂಗಳೂರು ಜೆಸ್ಯೂಟ್ ಎಜುಕೇಷನಲ್ ಸೊಸೈಟಿಯ (ಬಿಜೆಇಎಸ್) ಕಾರ್ಯದರ್ಶಿ ರೆ|ಜಾಯ್ ರೊಡ್ರಿಗಸ್ ಎಸ್ ಜೆ ಉಪಸ್ಥಿತರಿದ್ದರು. ಯುರೋಫಿನ್ಸ್ ನ ಮಾನವ ಸಂಪನ್ಮೂಲ ಮುಖ್ಯಸ್ಥರಾದ ಶ್ರೀ ಅರುಣ್ ಕುಮಾರ್ ಅವರ ಮೂಲಕ ಎಸ್ ಜೆಯುನಲ್ಲಿ ಲ್ಯಾಬ್ ಅನ್ನು ಹೇಗೆ ಸ್ಥಾಪಿಸಲಾಯಿತು ಎಂಬುದರ ಕುರಿತು ನಿರ್ದೇಶಕರಾದ ರೆ| ಕ್ಸೇವಿಯರ್ ಎಸ್ ಜೆ ವಿವರಿಸಿದರು. ರೆ|ಸ್ಟಿಬರ್ಟ್ ಪ್ರಯೋಗಾಲಯವನ್ನು ಆಶೀರ್ವದಿಸಿದರು, ನಂತರ ಅಧ್ಯಾಪಕರು ಹಾಗೂ ರಸಾಯನ ಶಾಸ್ತ್ರ ಮತ್ತು ಸಂಶೋಧನಾ ವಿದ್ಯಾರ್ಥಿಗಳು ಹೊಸದಾಗಿ ಸ್ಥಾಪಿಸಲಾದ ಲ್ಯಾಬ್ ನಲ್ಲಿನ ಸೌಲಭ್ಯಗಳನ್ನು ವೀಕ್ಷಿಸಿದರು.
ಯುರೋಫಿನ್ಸ್ ಬಗ್ಗೆ ಯುರೋಫಿನ್ಸ್ ಸೈಂಟಿಫಿಕ್ ತನ್ನ ಅಂಗ ಸಂಸ್ಥೆಗಳ ಮೂಲಕ ಆಹಾರ, ಪರಿಸರ, ಔಷಧೀಯ ಮತ್ತು ಸೌಂದರ್ಯವರ್ಧಕ ಉತ್ಪನ್ನ ಪರೀಕ್ಷೆ, ಡಿಸ್ಕವರಿ ಫಾರ್ಮಕಾಲಜಿ, ಪೋರೇನ್ಸಿಕ್, ಸುಧಾರಿತ ವಸ್ತು ವಿಜ್ಞಾನಗಳು ಮತ್ತು ಔಷಧೀಯ ಮತ್ತು ಕೃಷಿ ವಿಜ್ಞಾನ ಒಪ್ಪಂದ ಸಂಶೋಧನಾ ಸೇವೆಗಳಲ್ಲಿ ವಿಶ್ವ ನಾಯಕರಾಗಿದ್ದಾರೆ. ಭಾರತದಲ್ಲಿ ಯುರೋಫಿನ್ಸ್ ಗುಂಪಿನ ಕಂಪನಿಗಳು ಫಾರ್ಮಾಸ್ಯುಟಿಕಲ್ ಮತ್ತು ಆಗ್ರೋಸೈನ್ಸ್ ಆರ್ & ಡಿ ಮೌಲ್ಯ ಸರಣಿ, ಆಹಾರ ಮತ್ತು ಪರಿಸರ ಪರೀಕ್ಷೆ, ಜಿನೋಮಿಕ್ಸ್ ಸೇವೆಗಳು ಮತ್ತು ಗ್ರಾಹಕ ಉತ್ಪನ್ನ ಪರೀಕ್ಷೆಯಾದ್ಯಂತ ಗ್ರಾಹಕರಿಗೆ ಸೇವೆಗಳನ್ನು ಒದಗಿಸುತ್ತದೆ. ಯುರೋಫಿನ್ಸ್ ಗ್ರೂಪ್ ಆಫ್ ಕಂಪನಿಗಳು ಭಾರತದಲ್ಲಿ ಸುಮಾರು 4000 ಉದ್ಯೋಗಿಗಳನ್ನು ನೇಮಿಸಿಕೊಂಡಿದ್ದು, 15 ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸುತ್ತಿವೆ. ಭಾರತದಲ್ಲಿ ಮಾರಾಟವಾಗುವ ಆಹಾರ ಮತ್ತು ಔಷಧೀಯ ಉತ್ಪನ್ನಗಳ ಸುರಕ್ಷತೆ ಮತ್ತು ಗುಣಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವಾಗ, ಜಾಗತಿಕವಾಗಿ ಉತ್ಪನ್ನಗಳನ್ನು ತೆಗೆದುಕೊಳ್ಳುವ ಅನೇಕ ಭಾರತೀಯ ಕಂಪೆನಿಗಳಿಗೆ ಭಾರತದಲ್ಲಿ ಯುರೋಫಿನ್ಸ್ ಪ್ರಮುಖ ಪಾಲುದಾರರಾಗಿದ್ದಾರೆ.
ಸೈಂಟ್ ಜೋಸೆಫ್ಸ್ ವಿಶ್ವವಿದ್ಯಾಲಯದ ಬಗ್ಗೆ ಕರ್ನಾಟಕ ಸರ್ಕಾರವು 23ನೇ ಫೆಬ್ರವರಿ 2021 ರಂದು ಸೈಂಟ್ ಜೋಸೆಫ್ಸ್ ವಿಶ್ವವಿದ್ಯಾಲಯದ ಮಸೂದೆಯನ್ನು ಅಂಗೀಕರಿಸಿತು, 140 ವರ್ಷಗಳಷ್ಟು ಹಳೆಯದಾದ ಸೈಂಟ್ ಜೋಸೆಫ್ಸ್ ಕಾಲೇಜು (ಸ್ವಾಯತ್ತ) ವಿಶ್ವವಿದ್ಯಾಲಯವಾಗಲು ದಾರಿ ಮಾಡಿಕೊಟ್ಟಿತ್ತು. ಸೈಂಟ್ ಜೋಸೆಫ್ ವಿಶ್ವವಿದ್ಯಾನಿಲಯವು ಪಿಪಿಪಿ ಮಾದರಿಯಲ್ಲಿ ಕಾರ್ಯನಿರ್ವಹಿಸಲು ಉದ್ದೇಶಿಸಿರುವ ದೇಶದಲ್ಲಿ ವಿಶಿಷ್ಟವಾದ ವಿಶ್ವವಿದ್ಯಾಲಯವಾಗಿದೆ. ಹೊಸ ವಿಶ್ವವಿದ್ಯಾನಿಲಯವು ವೈಜ್ಞಾನಿಕ ಸಂಶೋಧನೆ/ಉತ್ಸಾಹ, ಗುಣಮಟ್ಟದ ಶಿಕ್ಷಣ ಮತ್ತು ನಾವೀನ್ಯತೆಯಗಳನ್ನು ಉತ್ತೇಜಿಸುವಲ್ಲಿ ನಾಯಕನಾಗುವ ಗುರಿಯನ್ನು ಹೊಂದಿದೆ ಹಾಗೂ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಸಾಕಷ್ಟು ಅವಕಾಶಗಳು ಮತ್ತು ಬೆಂಬಲವನ್ನು ಒದಗಿಸುವ ಮೂಲಕ ಉನ್ನತ ಶಿಕ್ಷಣದಲ್ಲಿ ಸಮಾನತೆಯನ್ನು ಸುಧಾರಿಸಲು ಕೆಲಸ ಮಾಡುತ್ತದೆ. ಇದು ಮಹಿಳೆಯರು, ಅಲ್ಪಸಂಖ್ಯಾತರು ಮತ್ತು ವಿಕಲಚೇತನರ ಸೇರ್ಪಡೆಯನ್ನು ಸಕ್ರಿಯವಾಗಿ ಉತ್ತೇಜಿಸುತ್ತದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.