



ಕಾರ್ಕಳ : ರಸ್ತೆ ಬದಿಯ ಮರಕ್ಕೆ ಪಿಕಪ್ ಢಿಕ್ಕಿ ಹೊಡೆದ ಘಟನೆ ಕಾರ್ಕಳ ತಾಲೂಕಿನ ಅಜೆಕಾರು ನೂಜಿಗುರಿ ಎಂಬಲ್ಲಿ ಸೆ..8 ನಡೆದಿದೆ . ಅಪಘಾತದ ತೀವ್ರ ತೆಗೆ ಪಿಕಪ್ ಮುಂಭಾಗ ನಜ್ಜುಗುಜ್ಜಾಗಿದೆ . ಚಾಲಕ ಸಿದ್ದಿಕ್ ಅಪಾಯ ದಿಂದ ಪಾರಾಗಿದ್ದಾರೆ . ಬೈಕ್ ಸವಾರನೋರ್ವ ಕಾರನ್ನು ಓವರ್ ಟೇಕ್ ಮಾಡಿಕೊಂಡು ಎದುರಿನಿಂದ ಬರುತಿದ್ದ ಸಮಯದಲ್ಲಿ ಪಿಕಪ್ ಡ್ರೈವರ್ ಅಪಘಾತ ತಪ್ಪಿಸುವ ಸಲುವಾಗಿ ರಸ್ತೆ ಬದಿಯ ಹೊಂಡಕ್ಕೆ ಪಿಕಪ್ ಇಳಿಸಿದ್ದ ಸಂದರ್ಭದಲ್ಲಿ ಎದುರಿನಲ್ಲಿದ್ದ ಮರಕ್ಕೆ ಢಿಕ್ಕಿ ಹೊಡೆದಿದೆ ಎಂದು ಪ್ರತ್ಯಕ್ಷ ದರ್ಶಿಯೋರ್ವರು ತಿಳಿಸಿದ್ದಾರೆ. ಪಿಕಪ್ ಕಡ್ತಲದಿಂದ ಬೈಲೂರು ಕಡೆಗೆ ಸಾಗುತಿತ್ತು. ಸ್ಥಳೀಯರ ಸಹಾಯದಿಂದ ಪಿಕಪ್ ಅನ್ನು ಮೇಲಕ್ಕೆತ್ತಲಾಗಿದೆ .
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.