



ನವದೆಹಲಿ: ಪ್ರಸಾರ ಭಾರತಿ ತನ್ನ ಬಾನುಲಿ ಸೇವೆಗೆ ಆಲ್ ಇಂಡಿಯಾ ರೇಡಿಯೊ ಬದಲು ‘ಆಕಾಶವಾಣಿ’ ಎಂದು ಕರೆಯಲು ನಿರ್ಧರಿಸಿದೆ.
ಆಕಾಶವಾಣಿಯ ಮಹಾನಿರ್ದೇಶಕ ವಸುಧಾ ಗುಪ್ತಾ ಹೊರಡಿಸಿದ ಆಂತರಿಕ ಆದೇಶದಲ್ಲಿ ಆಲ್ ಇಂಡಿಯಾ ರೇಡಿಯೊ(ಎಐಆರ್) ಹೆಸರನ್ನು ಆಕಾಶವಾಣಿ ಎಂದು ತಕ್ಷಣದಿಂದ ಜಾರಿಗೆ ಬರುವಂತೆ ತಿಳಿಸಲಾಗಿದೆ.
ಇದು ಸರ್ಕಾರದ ಅತ್ಯಂತ ಹಳೆಯ ನಿರ್ಧಾರವಾಗಿದ್ದು, ಈ ಹಿಂದೆ ಕಾರ್ಯಗತಗೊಳಿಸಲಾಗಿರಲಿಲ್ಲ. ಈಗ ಅದನ್ನು ಕಾರ್ಯಗತಗೊಳಿಸುತ್ತಿದ್ದೇವೆ ಎಂದು ಪ್ರಸಾರ ಭಾರತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೌರವ್ ದ್ವಿವೇದಿ ಹೇಳಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.