



ಬೆಂಗಳೂರು: ರಾಜ್ಯದ 28 ಜಿಲ್ಲೆಗಳಿಗೆ ಉಸ್ತುವಾರಿ ಸಚಿವರುಗಳನ್ನು ನೇಮಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದೇಶ ಹೊರಡಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಗೆ ವಿ. ಸುನಿಲ್ ಕುಮಾರ್ ಹಾಗೂ ಉಡುಪಿಗೆ ಎಸ್. ಅಂಗಾರವನ್ನು ನೇಮಿಸಲಾಗಿದೆ.
ದ.ಕ. ಉಸ್ತುವಾರಿ ಸಚಿವರಾಗಿದ್ದ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ನೆರೆಯ ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ನೇಮಿಸಲಾಗಿದೆ. ಮುಖ್ಯಮಂತ್ರಿ ಬೊಮ್ಮಾಯಿ ಅವರು ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ನೋಡಿಕೊಳ್ಳುವರು.

ಉಳಿದಂತೆ ಕೆ.ಎಸ್. ಈಶ್ವರಪ್ಪ ಶಿವಮೊಗ್ಗ, ಗೋವಿಂದ ಜಾರಜೋಳ ವಿಜಯಪುರ, ಶ್ರೀರಾಮುಲು ಬಳ್ಳಾರಿ, ಬಿ.ಸಿ. ಪಾಟೀಲ್ ಚಿತ್ರದುರ್ಗ, ಶಶಿಕಲಾ ಜೊಲ್ಲೆ ವಿಜಯನಗರ,
ಅರಗ ಜ್ಞಾನೇಂದ್ರ ತುಮಕೂರು ಜಿಲ್ಲೆಯ ಉಸ್ತುವಾರಿಯಾಗಿ ನೇಮಿಸಲಾಗಿದೆ.
ಬಸವರಾಜ ಬೊಮ್ಮಾಯಿ - ಬೆಂಗಳೂರು ನಗರ ಗೋವಿಂದ ಕಾರಜೋಳ- ಬೆಳಗಾವಿ ಕೆ.ಎಸ್.ಈಶ್ವರಪ್ಪ -ಚಿಕ್ಕಮಗಳೂರು ಬಿ.ಶ್ರೀರಾಮುಲು- ಬಳ್ಳಾರಿ ವಿ.ಸೋಮಣ್ಣ- ಚಾಮರಾಜನಗರ ಉಮೇಶ್ಕತ್ತಿ - ವಿಜಯಪುರ ಎಸ್.ಅಂಗಾರ - ಉಡುಪಿ ಅರಗ ಜ್ಞಾನೇಂದ್ರ -ತುಮಕೂರು ಡಾ.ಸಿ.ಎನ್.ಅಶ್ವಥ್ ನಾರಾಯಣ -ರಾಮನಗರ ಸಿ.ಸಿ.ಪಾಟೀಲ್ -ಬಾಗಲಕೋಟೆ ಆನಂದ್ ಸಿಂಗ್- ಕೊಪ್ಪಳ ಕೋಟಾ ಶ್ರೀನಿವಾಸ ಪೂಜಾರಿ - ಉತ್ತರ ಕನ್ನಡ ಪ್ರಭು ಚವ್ಹಾಣ -ಯಾದಗಿರಿ ಮುರುಗೇಶ್ ನಿರಾಣಿ -ಕಲಬುರಗಿ ಶಿವರಾಮ್ ಹೆಬ್ಬಾರ್-ಹಾವೇರಿ ಎಸ್.ಟಿ.ಸೋಮಶೇಖರ್- ಮೈಸೂರು ಬಿ.ಸಿ.ಪಾಟೀಲ್- ಚಿತ್ರದುರ್ಗ,/ಗದಗ ಬಿ.ಎ.ಬಸವರಾಜ್- ದಾವಣಗೆರೆ ಡಾ.ಕೆ.ಸುಧಾಕರ್- ಬೆಂಗಳೂರು ಗ್ರಾಮಾಂತರ ಕೆ.ಗೋಪಾಲಯ್ಯ-ಹಾಸನ/ ಮಂಡ್ಯ ಶಶಿಕಲಾ ಜೊಲ್ಲೆ- ವಿಜಯನಗರ ಎಂ.ಟಿ.ಬಿ.ನಾರಾಜ್ -ಚಿಕ್ಕಬಳ್ಳಾಪುರ ಕೆ.ಸಿ.ನಾರಾಯಣಗೌಡ- ಶಿವಮೊಗ್ಗ ಬಿ.ಸಿ.ನಾಗೇಶ್- ಕೊಡಗು ವಿ.ಸುನೀಲ್ಕುಮಾರ್- ದಕ್ಷಿಣ ಕನ್ನಡ ಆಚಾರ್ ಹಾಲಪ್ಪ -ಧಾರವಾಡ ಶಂಕರ್ ಪಟೇಲ್ ಮುನೇನಕೊಪ್ಪ - ರಾಯಚೂರು/ ಬೀದರ್ ಮುನಿರತ್ನ -ಕೋಲಾರ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.