



ಕಾರ್ಕಳ : ರಸ್ತೆಯಲ್ಲಿ ನಡೆದುಕೊಂಡು ಹೋಗುತಿದ್ದ ಸಮಯದಲ್ಲಿ ಓಮ್ನಿ ಕಾರು ಢಿಕ್ಕಿಯಾದ ಘಟನೆ ಡಿ.೧೮ ರ ರಾತ್ರಿ ಅಜೆಕಾರು ಗುಡ್ಡೆಯಂಗಡಿ ಬಳಿ ನಡೆದಿದೆ. ರವಿ, ಸುಂದರ, ನಾರಾಯಣ, ಎಂಬುವವರು ಮೂವರು ರಸ್ತೆಯಲ್ಲಿ ನಡೆದು ಕೊಂಡು ಹೋಗುತಿದ್ದ ಸಮಯದಲ್ಲಿ ಹೆಬ್ರಿ ಕಡೆಯಿಂದ ವೇಗವಾಗಿ ಬರುತಿದ್ದ ಓಮ್ನಿ ಕಾರು ಮೂವರಿಗೆ ಢಿಕ್ಕಿ ಹೊಡೆದಿದೆ . ಸುಂದರ ಎಂಬವವರಿಗೆ ತಲೆಯ ಹಿಂಭಾಗಕ್ಕೆ ತೀವ್ರವಾದ ಪಟ್ಟಾಗಿದ್ದು ಅವರನ್ನು ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾರಾಯಣ ಎಂಬುವವರಿಗೆ ಬಲಕಣ್ಣು ತುಟಿ ಭಾಗಗಳಿಗೆ ಗಾಯಗಳಾಗಿವೆ , ಕಾರು ನಿಲ್ಲಿಸದೆ ಹೋದ ಕಾರಣ ಪೋಲೀಸರು ಪತ್ತೆಗಾಗಿ ಬಲೆ ಬೀಸಿದ್ದಾರೆ. ಅಜೆಕಾರು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.