



ಭಟ್ಕಳ: ಉತ್ತರ ಕನ್ನಡ ದಲ್ಲಿ ಭಾರಿ ಮಳೆ ಸುರಿಯುತಿದ್ದು ಸಂಚಾರದಲ್ಲಿದ್ದ ರೈಲುಗಳನ್ನು ಜಿಲ್ಲೆಯ ವಿವಿಧ ರೈಲ್ವೆ ನಿಲ್ದಾಣಗಳಲ್ಲಿ ನಿಲುಗಡೆಗೆ ಮಾಡಲಾಗಿದೆ. ಮಡಗಾವ ಮಂಗಳೂರು ರೈಲು ಸಂಖ್ಯೆ 06601 ಸಂಚಾರ ರದ್ದುಗೊಂಡಿದ್ದು, ಮಂಗಳೂರು ಮಡಗಾವ 06602 ರೈಲು ಉಡುಪಿ ನಿಲ್ದಾಣದ ವರೆಗೆ ಸೀಮಿತಗೊಂಡಿದೆ. ಉಳಿದಂತೆ ಸಂಚಾರದಲ್ಲಿದ್ದ ಎರ್ನಾಕುಲಂ ಪುಣೆ, ಬೆಂಗಳೂರು ಕಾರವಾರ ಎಕ್ಸ್ ಪ್ರೆಸ್, ಕಾರವಾರ ಯಶವಂತಪುರ ಎಕ್ಸ್ ಪ್ರೆಸ್ ಮೊದಲಾದ ರೈಲುಗಳು ಜಿಲ್ಲೆಯ ಭಟ್ಕಳ, ಶಿರೂರು, ಹೊನ್ನಾವರ ನಿಲ್ದಾಣಗಳಲ್ಲಿ ನಿಂತಿವೆ. ನೀರು ತುಂಬಿ ಹಳಿಗಳಿಗೆ ಹಾನಿ ಸಂಭವಿಸಿದ್ದು ರೈಲು ಸಂಚಾರ ವಿಳಂಬವಾಗಿ ಆರಂಭವಾಗಲಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.