logo
WhatsApp Image 2026-04-02 at 14.46.04.jpeg
hindalco everlast.jpeg

ಅಖಿಲ ಕರ್ನಾಟಕ ಮಹಿಳಾ ಸೌಂದರ್ಯ ತಜ್ಞೆಯರ ಸಂಘದ ವತಿಯಿಂದ ರಕ್ತದಾನ ಶಿಬಿರ

ಟ್ರೆಂಡಿಂಗ್
share whatsappshare facebookshare telegram
2 Sept 2023
post image

ಅಖಿಲ ಕರ್ನಾಟಕ ಮಹಿಳಾ ಸೌಂದರ್ಯ ತಜ್ಞೆಯರ ಸಂಘ (ರಿ) ಉಡುಪಿ ಕುಂದಾಪುರ ವಲಯ ಹಾಗೂ ಇಂಡಿಯನ್ ರೆಡಕ್ರಾಸ್ ಸೊಸೈಟಿ,ಕುಂದಾಪುರ ಇವರ ಸಹಯೋಗದಲ್ಲಿ
ಬುಧವಾರ ಹೋಟೆಲ್ ಶರೋನ್ ನಲ್ಲಿ ರಕ್ತದಾನ ಶಿಬಿರವನ್ನು ಎರ್ಪಡಿಸಲಾಯಿತು.

ಶ್ರೀಮತಿ ಕಿಶ್ವರ್ ಉದ್ಘಾಟನೆಯನ್ನು ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀಮತಿ ವೇದಾ ಸುವರ್ಣ,ಶ್ರೀಮತಿ ಎಡ್ನ ಜತ್ತನ್ನ ಹಾಗೂ ವೀರೇಂದ್ರ ಉಪಸ್ಥಿತರಿದ್ದರು. ಸಭೆಯ ಅಧ್ಯಕ್ಷತೆಯನ್ನು ಶ್ರೀಮತಿ ಸುವಿತಾ ಗಣೇಶ್ ವಹಿಸಿದ್ದರು.ಕಾರ್ಯಕ್ರಮದಲ್ಲಿ 37 ಕ್ಕೂ ಅಧಿಕ ಮಂದಿ ರಕ್ತದಾನ ಮಾಡಿದರು.ಕುಂದಾಪುರ ವಲಯ, ಬ್ರಹ್ಮಾವರ ವಲಯ ,ಬೈಂದೂರು ವಲಯ ,ಹಾಗೂ ಉಡುಪಿ ವಲಯದಿಂದ ಸೌಂದರ್ಯ ತಜ್ಞೆಯರು ಆಗಮಿಸಿದ್ದರು. ಶ್ರೀಮತಿ ಕವನಾ ಕಾರ್ಯಕ್ರಮ ನಿರೂಪಣೆ ಮಾಡಿದರು.ಶ್ರೀಮತಿ ಶೋಭಾ ಅತಿಥಿಗಳಿಗೆ ಸ್ಮರಣಿಕೆ ನೀಡುದರೊಂದಿಗೆ ವಂದಿಸಿದರು.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.