



ಬ್ರಹ್ಮಾವರ ತಾಲೂಕಿನ ಪೇತ್ರಿ ಮದಗದ ಪಾಂಡು ನಾಯ್ಕ ಎಂಬವರು ಸ್ನಾನ ಮಾಡಲು ಹೋಗಿ ಕಾಲು ಜಾರಿ ನೀರಿಗೆ ಬಿದ್ದಿದ್ದು ಮೃತಪಟ್ಟ ಘಟನೆ ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಮದ್ಯಾಹ್ನ ಸುಮಾರು 1:00 ಗಂಟೆಗೆ ಪಾಂಡು ನಾಯ್ಕ್ ಎಂಬುವವರು ನೀರಿಗೆ ಬಿದ್ದಿದ್ದಾರೆ. ಸ್ಥಳೀಯರು ಯಾರು ಕೂಡ ಕಾಪಾಡಲು ಹೋಗದ ಕಾರಣ ನೀರಿನಲ್ಲಿ ಮುಳುಗಿ ಪಾಂಡು ನಾಯ್ಕ ಅವರು ಮೃತಪಟ್ಟಿದ್ದಾರೆ.ಹೊಳೆಯಲ್ಲಿ ಹೂಳಿದ್ದ ಕಾರಣ ಸ್ಥಳಿಯರು ಸಹಾಯಕ್ಕೆ ಬರಲಿಲ್ಲ ಎಂದು ತಿಳಿದು ಬಂದಿದೆ.5ಗಂಟೆಗೆ ಸುಮಾರಿಗೆ ಮುಳುಗು ತಜ್ಞ ಈಶ್ವರಿಗೆ ಕರೆ ಬಂದಿದ್ದು,ಕೂಡಲೇ ಉಡುಪಿ ಪೇರ್ ಸರ್ವಿಸ್ ಅವರ ಜೊತೆಗೂಡಿ 5.30ರ ಸುಮಾರಿಗೆ ಮೃತ ದೇಹ ಮೇಲಕೆತ್ತಿದ್ದಾರೆ.ಬ್ತಹ್ಮಾವರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.