



ಕಾರ್ಕಳ: ಸಿಎ ಅಂತಿಮ ಪರೀಕ್ಷೆಯಲ್ಲಿ ಹೆಬ್ರಿ ತಾಲೂಕಿನ ಮಂಡಾಡಿಜಡ್ಡಿನ ಚೈತ್ರ ಉತ್ತೀರ್ಣರಾಗಿದ್ದಾರೆ. ಅವರು ಗೋವಿಂದ ಹಾಗೂ ಕುಸುಮ ದಂಪತಿಯ ಪುತ್ರಿಯಾಗಿದ್ದಾರೆ . ಚೈತ್ರ ಹೆಬ್ರಿಯ ರವಿರಾವ್ ಅ್ಯಾಂಡ್ ಕೊ ಸಂಸ್ಥೆಯಲ್ಲಿ ತಮ್ಮ ಆರ್ಟಿಕಲ್ಷಿಪ್ನ್ನು ಮುಗಿಸಿದ್ದಾರೆ. ಚಾರ ಗ್ರಾಮದ ಹಳ್ಳಿ ಯಾಗಿರುವ ಮಂಡಾಡಿಜಡ್ಡಿನ ಚೈತ್ರ ಓದಿನಲ್ಲಿ ಉತ್ತಮ ಅಂಕಗಳಿಸಿದ್ದು ಯಾವುದೇ ಕೋಚಿಂಗ್ ಸೆಂಟರ್ ಗೆ ಹೋಗಿಲ್ಲ ಸ್ವ ಜ್ಞಾನಾರ್ಜನೆ ಮಾಡಿ ಸಿ ಎ ಅಂತಿಮ ಪರೀಕ್ಷೆ ಯಲ್ಲಿ 225 ಅಂಕ ಗಲಿಸಿ ಉತ್ತಿರ್ಣರಾಗಿದ್ದಾರೆ. ಹೆಬ್ರಿಯ ಅಮೃತ ಭಾರತಿ ಕಾಲೇಜಿನಲ್ಲಿ ಪಿಯುಸಿ ಮುಗಿಸಿ, ಬ್ರಹ್ಮಾವರದ ಎಸ್ ಎಂ ಎಸ್ ಡಿಗ್ರಿ ಕಾಲೇಜಿನಲ್ಲಿ ಬಿಕಾಂ ಪದವಿ ಪಡೆದಿದ್ದು , ಈಗ ಪ್ರಶಕ್ತ ವಾಗಿ ಬೆಂಗಳೂರಿನ ಜಯನಗರ 8ನೆ ಬ್ಲಾಕ್ ನಲ್ಲಿರುವ ಎಂಡಿಎ ಅ್ಯಾಂಡ್ ಕೊ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದಾರೆ
.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.