



ಕಾರ್ಕಳ: ರೋಟರಿ ಕ್ಲಬ್ ಕಾರ್ಕಳ ಇದರ ವಜ್ರಮಹೋತ್ಸವ ಸಂಭ್ರಮದ ಪ್ರಯುಕ್ತ ದೀಪಾವಳಿ ಗೂಡುದೀಪ ಸ್ಪರ್ಧೆಯನ್ನು ನವೆಂಬರ್ 19 ರವಿವಾರ ಸಂಜೆ 5 ರಿಂದ ರೋಟರಿ ಬಾಲಭವನದಲ್ಲಿ ಆಯೋಜಿಸಲಾಗಿದೆ. ಸ್ಪರ್ಧೆಯಲ್ಲಿ ಸಾಂಪ್ರದಾಯಿಕ ಮತ್ತು ಆಧುನಿಕ ವಿಭಾಗಳಿದ್ದು ಸಾಂಪ್ರದಾಯಿಕ ವಿಭಾಗದಲ್ಲಿ ಗೂಡು ಮತ್ತು ಬಣ್ಣದ ಕಾಗದದ ಬಳಕೆಗೆ ಮಾತ್ರ ಅವಕಾಶವಿದೆ ಆಧುನಿಕ ವಿಭಾಗದಲ್ಲಿ ಹೂ, ಎಲೆ, ಗರಿ, ಗಾಜು, ಪೇಪರ್, ನವದಾನ್ಯ ಇತ್ಯಾದಿಗಳಿಗೆ ಅವಕಾಶವಿದೆ.
ಸ್ಥಳೀಯ ಸ್ಪರ್ಧಿಗಳಿಗೆ ಪ್ರತೇಕ ವಿಭಾಗ ಕಾರ್ಕಳದ ಸ್ಥಳೀಯರಿಗೆ ಗೂಡುದೀಪ ತಯಾರಿಸಲು ಪ್ರೋತ್ಸಾಹ ನೀಡುವ ಸಲುವಾಗಿ ಪ್ರತೇಕ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು ಗುರುತು ಚೀಟಿ ಕಡ್ಡಾಯವಾಗಿದೆ.
ಆಕರ್ಷಕ ಬಹುಮಾನಗಳು
ಪ್ರತೀ ವಿಭಾಗದ ಸ್ಪರ್ಧಾ ವಿಜೇತರಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನವಾಗಿ ಚಿನ್ನದ ಪದಕ ಹಾಗೂ ಪ್ರಶಸ್ತಿ ಪತ್ರ, ಸಮಾಧಾನಕರ ಬಹುಮಾನ ವಿಜೇತರಿಗೆ ನಗದು ಹಾಗೂ ಪ್ರಶಸ್ತಿ ಪತ್ರ ಮತ್ತು ಭಾಗವಹಿಸಿ ಎಲ್ಲಾ ಸ್ಪರ್ಧಿಗಳಿಗೆ ಪ್ರಶಸ್ತಿ ಪತ್ರದೊಂದಿಗೆ ಗೌರವಾರ್ಪಣೆ ನಡೆಸಲಾಗುವುದು. ಎಂದು ರೋಟರಿ ಕ್ಲಬ್ ಅದ್ಯಕ್ಷರಾದ ಜಾನ್ ಆರ್ ಡಿ' ಸಿಲ್ವ ಹಾಗೂ ಸರ್ಧೆಯ ಸಂಯೋಜಕರಾದ ಶುಭದರಾವ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.