logo
WhatsApp Image 2026-04-02 at 14.46.04.jpeg
hindalco everlast.jpeg

ಯುರೇಕಾ - ಸಂಶೋಧನೆ, ಬರವಣಿಗೆ ಮತ್ತು ಪ್ರಕಟಣೆ ಕುರಿತು ಮೂರು ದಿನಗಳ ಅಂತರಾಷ್ಟ್ರೀಯ ಕಾರ್ಯಾಗಾರ

ಟ್ರೆಂಡಿಂಗ್
share whatsappshare facebookshare telegram
6 Aug 2023
post image

ಮಂಗಳೂರು: ಆಂತರಿಕ ಗುಣಮಟ್ಟದ ಭರವಸೆ ಕೋಶ, PACE, ಮಂಗಳೂರು ಇವರ ಸಹಯೋಗದೊಂದಿಗೆ ಸಂಶೋಧನೆ, ನಾವೀನ್ಯತೆ ಮತ್ತು ಉದ್ಯಮಶೀಲತೆಗಾಗಿ ಸೆಂಟರ್ ಆಫ್ ಎಕ್ಸಲೆನ್ಸ್, ಸಂಶೋಧನೆ, ಬರವಣಿಗೆ ಮತ್ತು ಪ್ರಕಟಣೆಯ ಕುರಿತು 2023, ಆಗಸ್ಟ್ 3, 4 ಮತ್ತು 5, ಮೂರು ದಿನಗಳ ಕಾರ್ಯಾಗಾರವನ್ನು ಆಯೋಜಿಸುತ್ತಿದೆ.

ಕಾರ್ಯಾಗಾರವನ್ನು ಆಗಸ್ಟ್ 3, 2023 ರಂದು ಮಂಗಳೂರಿನ PACE ವಿವಿಧೋದ್ದೇಶ ಸಭಾಂಗಣದಲ್ಲಿ ಉದ್ಘಾಟಿಸಲಾಯಿತು.

ಈ ಕಾರ್ಯಾಗಾರವು ಸಂಶೋಧನಾ ವಿದ್ವಾಂಸರು ಮತ್ತು ಶಿಕ್ಷಣತಜ್ಞರನ್ನು ಸಂಶೋಧನಾ ಬರವಣಿಗೆ, ಪ್ರಕಟಣೆ ಮತ್ತು ಪ್ರಸರಣಕ್ಕೆ ಸಂಬಂಧಿಸಿದ ಅಗತ್ಯ ಕೌಶಲ್ಯ ಮತ್ತು ಜ್ಞಾನದೊಂದಿಗೆ ಸಜ್ಜುಗೊಳಿಸುವ ಗುರಿಯನ್ನು ಹೊಂದಿದೆ. ಮುಖ್ಯ ಅತಿಥಿ, ಸೌದಿ ಅರೇಬಿಯಾದ ಇಮಾಮ್ ಅಬ್ದುಲ್‍ರಹಮಾನ್ ಬಿನ್ ಫೈಸಲ್ ವಿಶ್ವವಿದ್ಯಾನಿಲಯದ ಆರ್ಕಿಟೆಕ್ಚರ್ ಮತ್ತು ಪ್ಲಾನಿಂಗ್ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಎಂ. ಅಬ್ದುಲ್ ಮುಜೀಬು ಕಾರ್ಯಾಗಾರವನ್ನು ಉದ್ಘಾಟಿಸಿದರು. ಡಾ ಮುಜೀಬು ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ ಪರಿಣಾಮಕಾರಿ ಸಂಶೋಧನಾ ಬರವಣಿಗೆಯ ಮಹತ್ವ ಹಾಗೂ ಜ್ಞಾನ ಮತ್ತು ಶೈಕ್ಷಣಿಕ ಉತ್ಕøಷ್ಟತೆಗೆ ಕೊಡುಗೆ ನೀಡುವಲ್ಲಿ ಅದರ ಮಹತ್ವವನ್ನು ಒತ್ತಿ ಹೇಳಿದರು. ಸಂಶೋಧಕರು ತಮ್ಮ ಸಂಶೋಧನೆಯ ಕ್ಷೇತ್ರದಲ್ಲಿ ವಿಶ್ವಾಸಾರ್ಹತೆ ಮತ್ತು ಪ್ರಭಾವವನ್ನು ಖಚಿತಪಡಿಸಿಕೊಳ್ಳಲು ಉನ್ನತ-ಗುಣಮಟ್ಟದ ಸಂಶೋಧನಾ ಅಭ್ಯಾಸಗಳು ಮತ್ತು ನೈತಿಕ ಬರವಣಿಗೆಯ ಮಾನದಂಡಗಳನ್ನು ಅಳವಡಿಸಿಕೊಳ್ಳುವ ಅಗತ್ಯಕ್ಕೆ ಒತ್ತು ನೀಡಿದರು. ಗೌರವ ಅತಿಥಿಗಳಾದ ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಗಂಗೋತ್ರಿಯ ಅಂತರಾಷ್ಟ್ರೀಯ ಪೋಸ್ಟ್ ಡಾಕ್ ಫೆಲೋ ಡಾ. ಅಜೀಝುದ್ದೀನ್ ಸುಲ್ತಾನಿ ಅವರು ತಮ್ಮ ಸಂಶೋಧನಾ ಕಾರ್ಯದಲ್ಲಿ ಯಶಸ್ಸು ಸಾಧಿಸಲು ಉತ್ತಮ ಸಂಶೋಧಕರು ಬೆಳೆಸಿಕೊಳ್ಳಬೇಕಾದ ಗುಣಗಳು ಮತ್ತು ಉತ್ತಮ ಅಭ್ಯಾಸಗಳನ್ನು ವಿವರಿಸಿದರು. ಶ್ರೀ ಶರ್ಫುದ್ದೀನ್ ಪಿ.ಕೆ., ಎಜಿಎಂ (ಕ್ಯಾಂಪಸ್) ಗೌರವ ಅತಿಥಿಯಾಗಿದ್ದರು.

ಪ್ರಾಂಶುಪಾಲರಾದ ಡಾ. ರಮೀಸ್ ಎಂ.ಕೆ. ಅಧ್ಯಕ್ಷೀಯ ನುಡಿಗಳನ್ನಾಡಿದರು. ಸಿಎಸ್‍ಇ ವಿಭಾಗದ ಪ್ರಾಧ್ಯಾಪಕ ಪ್ರೊ ಫಾತಿಮತ್ ರೈಹಾನ್ ಸ್ವಾಗತಿಸಿದರು. ಯುರೇಕಾದ ಸಂಚಾಲಕ ಡಾ. ಪ್ರಶಾಂತ್ ಪೈ ಎಂ, ಇವರು ಡಾ. ಮುಜೀಬು ಅವರನ್ನು ಸಭೆಗೆ ಪರಿಚಯಿಸಿದರು.

ಪ್ರಾಧ್ಯಾಪಕಿ ಕಾವ್ಯಶ್ರೀ, ಸಿವಿಲ್ ಇಂಜಿನಿಯರ್ ಅಧ್ಯಾಪಕರು ಇವರು ಧನ್ಯವಾದ  ನೀಡಿದರು. ಸಿಎಮ್‍ಎಸ್‍ಆರ್‍ನ ಪ್ರಾಧ್ಯಾಪಕರಾದ ಶಮಾ ಎ, ಕಾರ್ಯಕ್ರಮ ನಿರೂಪಿಸಿದರು

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.