



ಕಾರ್ಕಳ; ಕರ್ನಾಟಕ ರಾಜ್ಯ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶ್ರೀ ವಿ ಸುನಿಲ್ ಕುಮಾರ್ ಇವರ ನೇತೃತ್ವದಲ್ಲಿ ವಿಶ್ವದಾದ್ಯಂತ ನೆಲ, ಜಲ ಹಾಗೂ ಆಕಾಶದಲ್ಲಿ ಬಹಳ ವಿಜೃಂಭಣೆಯಿಂದ ನಡೆಯಲಿದೆ. ಈಗಾಗಲೇ ಹಲವಾರು ಐತಿಹಾಸಿಕ ಸ್ಥಳಗಳು, ಆಸ್ಪತ್ರೆಗಳು, ಮಠಗಳು, ಸರಕಾರಿ ಕಛೇರಿಗಳು, ಶಿಕ್ಷಣ ಸಂಸ್ಥೆಗಳು, ಕಡಲ ಕಿನಾರೆ, ಕಾರ್ಕಳದ ಗೋಮಟೇಶ್ವರ ಬೆಟ್ಟ, ಚತರ್ಮುಖ ಬಸದಿ, ಕೋಟಿ ಚೆನ್ನಯ ಥೀಂ ಪಾರ್ಕ್, ರಾಮ ಸಮುದ್ರ, ಹಿರಿಯಂಗಡಿ ಮಾನಸ್ತಂಭ ಬಸದಿ, ಕಾರ್ಕಳ ಮತ್ತು ಹೆಬ್ರಿಯ ೩೪ ಗ್ರಾಮ ಪಂಚಾಯತ್, ಪುರಸಭಾ ಕಛೇರಿ, ಹೀಗೆ ಹಲವಾರು ಸಂಘಟನೆಗಳು ಕೋಟಿ ಕಂಠ ಗಾಯನದ ಯಶಸ್ಸಿಗಾಗಿ ಬಹಳ ಉತ್ಸುಕತೆಯಿಂದ ಸಕಲ ತಯಾರಿ ನಡೆದಿದೆ.
ಕೇವಲ ೨೫ ದಿನದ ಕರೆಗೆ ಸುಮಾರು ಒಂದೂವರೆ
ಕೋಟಿ ಜನತೆಯ ಬೆಂಬಲ ವ್ಯಕ್ತವಾಗಿರುವುದು ಅಭೂತಪೂರ್ವ. ಸಚಿವರಾದ ವಿ ಸುನಿಲ್ ಕುಮಾರ್ ಇವರ ಕಾರ್ಯ ವೈಖರಿಯೇ ಜನತೆಯ ಮೆಚ್ಚುಗೆಗೆ ಸಾಕ್ಷಿ. ವಿಶೇಷವಾಗಿ ಕಾರ್ಕಳದ ಸಜ್ಜನ ಬಂಧುಗಳು ಕೋಟಿ ಕಂಠ ಗಾಯನದ ಕಾರ್ಯಕ್ರಮದಲ್ಲಿ ಭಾಗವಹಿಸಿ, ರಾಜ್ಯದಲ್ಲೇ ಕಾರ್ಕಳದ ಕೀರ್ತಿಯನ್ನು ಉನ್ನತಮಟ್ಟದಲ್ಲಿ ತಲುಪಿಸಬೇಕು ಎಂದು ಕಾರ್ಕಳ ಬಿಜೆಪಿ ಅಧ್ಯಕ್ಷರಾದ ಶ್ರೀ ಮಹಾವೀರ ಹೆಗ್ಡೆ ಪತ್ರಿಕಾ ಪ್ರಕಟಣೆ ತಿಳಿಸಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.