



ಹೆಬ್ರಿ : ಬಾರತೀಯ ಗೋತಳಿಗಳ ಅಭಿವೃದ್ದಿ ಕೇಂದ್ರ ಸಂಜೀವಿನಿ ಫಾರ್ಮು ಮತ್ತು ಡೈರಿ ಮುನಿಯಾಲು ಗೋಧಾಮಕ್ಕೆ ಅಹಮದ್ ಬಾದ್ ಮಾಜಿ ಮೇಯರ್ ಗೌತಮ್ ಶಾ ಭೇಟಿ ನೀಡಿ ಗೋಧಾಮವನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು. ಗೋಧಾಮವನ್ನು ಪುರಾತನ ಕಲ್ಪನೆಯಲ್ಲಿ ಆಧುನಿಕವಾಗಿ ನಿರ್ಮಿಸಿ ಕೃಷಿ ಪ್ರವಾಸೋಧ್ಯಮತಾಣವಾಗಿ ನಿರ್ಮಿಸಿ ಅಂತರಾಷ್ಟ್ರೀಯ ಖ್ಯಾತಿ ನೀಡಿರುವುದಕ್ಕೆ ಗೌತಮ್ ಶಾ ಖುಷಿ ಪಟ್ಟರು. ಬಳಿಕ ಗೋಧಾಮದಲ್ಲಿ ವಿಹಾರ ಮಾಡಿ ಗೋಪೂಜೆ ಸಲ್ಲಿಸಿದರು. ಭಾರತೀಯ ಗೋತಳಿಗಳ ಅಭಿವೃದ್ಧಿ ಕೇಂದ್ರ ಸಂಜೀವಿನಿ ಫಾರ್ಮ್ಸ್ ಮತ್ತು ಡೈರಿ ಗೋಧಾಮದ ಸಂಸ್ಥಾಪಕ ಡಾ.ಜಿ.ರಾಮಕೃಷ್ಣ ಆಚಾರ್ ಮತ್ತು ಸವಿತಾ ರಾಮಕೃಷ್ಣ ಆಚಾರ್ ಗೋಧಾಮದ ಉದ್ದೇಶವನ್ನು ವಿವರಿಸಿದರು. ದೆಹಲಿಯ ಪ್ರದೀಪ್ ಖೇಡಿಯ ಸಹಿತ ಹಲವು ಹಾಜರಿದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.