



ಕಾರ್ಕಳ: ಸರ್ಕಾರಗಳು ಎಲ್ಲಾ ವರ್ಗದ ಜನರಿಗೆ ಮೂಲಭೂತ ಸೌಕರ್ಯಗಳನ್ನೊದಗಿಸಲು ಕಟಿಬದ್ದವಾಗಿದೆ . ತಹಸಿಲ್ದಾರ್ ಪುರಂದರ ಕೆ. ಹೇಳಿದರು ಅವರು ಕಾರ್ಕಳದ ಗಾಂಧಿಮೈದಾನದಲ್ಲಿ ನಡೆದ ೭೩ ನೇ ಗಣರಾಜ್ಯೋತ್ಸವ ದ ಧ್ವಜಾರೋಹಣ ನೆರವೇರಿಸಿ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳು ಹಾಗೂ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜ್ಯಾರಿಗೊಳಿಸಲು ಗ್ರಾಮೀಣ ಜನರು ಸಕ್ರಿಯವಾಗಿ ಭಾಗವಹಿಸುವುದು ಅವಶ್ಯವಾಗಿರುವುದರಿಂದ, ಸರ್ಕಾರವು ಗ್ರಾಮಪಂಚಾಯತ್ಗಳ ಮುಖಾಂತರ ಗ್ರಾಮಸಭೆಗಳನ್ನು ಸದೃಢಗೊಳಿಸಲು ಸಂಕಲ್ಪ ಮಾಡಿದೆ. ಪ್ರತಿಯೊಬ್ಬನೂ ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳಬೇಕು ಮತ್ತು ತನ್ಮೂಲಕ ಸಮೃದ್ದ ಭಾರತ ನಿರ್ಮಾಣವಾಗಬೇಕೆಂಬ ಆಶ್ರಯದೊಂದಿಗೆ ಉದ್ಯೋಗ ನಿರ್ಮಾಣ ಕ್ಷೇತ್ರಗಳು, ಸ್ವಸಹಾಯ ಸಂಘಗಳು, ಸರಕಾರ ಮತ್ತು ಸರಕಾರೇತರ ಸಂಸ್ಥೆಗಳ ಮುಖಾಂತರ ಅಭಿವೃದ್ಧಿ ಯೋಜನೆಗಳನ್ನು ಆಯೋಸಿದೆ.ಎಂದರು . ಕರ್ಯಕ್ರಮದಲ್ಲಿ ಕಾರ್ಕಳ ಪುರಸಭೆ ಮುಖ್ಯಾಧಿಕಾರಿ ರೂಪಾ ಶೆಟ್ಟಿ , ಡಿವೈಎಸ್ಪಿ ವಿಜಯಪ್ರಸಾದ್, ಗೃಹರಕ್ಷಕದಳ ಹಾಗು ಪೋಲೀಸ್ ಸಿಬ್ಬಂದಿಗಳು ,ಮೊದಲಾದವರು ಉಪಸ್ಥಿತರಿದ್ದರು
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.