



ಹೆಬ್ರಿ : ಅಮೃತಭಾರತಿ ಸಂಸ್ಥೆಯ ಮಾತೃಮಂಡಳಿ ನೇತೃತ್ವದಲ್ಲಿ ಮಾವಿನ ಕೆತ್ತೆ ಉಪ್ಪಿನಕಾಯಿ ತಯಾರಿ ಕುರಿತ ಪ್ರಾತ್ಯಕ್ಷಿಕೆ ಅನ್ನಪೂರ್ಣ ಸಭಾಂಗಣದಲ್ಲಿ ನಡೆಸಿ, ಸಂಸ್ಥೆಗೆ ಹಸ್ತಾಂತರಿಸಲಾಯಿತು. ಸಂಸ್ಥೆಯ ಕಾರ್ಯದರ್ಶಿ ಎಚ್. ಗುರುದಾಸ್ ಶೆಣೈ, ವಿದ್ಯಾಭಾರತಿ ಕಾರ್ಯದರ್ಶಿ ಮಹೇಶ್ ಹೈಕಾಡಿ, ಮಾತೃಮಂಡಳಿ ಅಧ್ಯಕ್ಷೆ ವೀಣಾ ಆರ್ ಭಟ್, ಕಾರ್ಯದರ್ಶಿ ಸುಪ್ರೀತ ಪಿ ಶೆಟ್ಟಿ, ಮಾತೆಯರಾದ ಸ್ನೇಹಲತಾ ಅಡಿಗ, ಲೀಲಾವತಿ ಉಡುಪ, ಪಾವನ ಜೋಯಿಸ್, ನಂದಿತ ಕಾಮತ್, ವಸಂತಿ ಹೆಬ್ಬಾರ್, ಭಾರತಿ ರಾವ್, ಪ್ರತಿಭ ರಾವ್, ಶೋಭಾ ನಾಯಕ್, ರೇವತಿ, ಪೂರ್ಣಿಮಾ ಪೂಜಾರಿ, ಶಶಿಕಲಾ, ರೂಪ ಭಟ್, ಸುಂದರಿ, ಆಶಾಲತಾ, ಶೃತಿ ಭಟ್, ಲಲಿತ ಶೆಟ್ಟಿ ಸೇರಿದಂತೆ ಮಾತೃಮಂಡಳಿ ಮಾತೆಯರು ಉಪಸ್ಥಿತರಿದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.