



ಹೆಬ್ರಿ : ಹುತ್ತುರ್ಕೆಯ ಬ್ರಹ್ಮಲಿಂಗೇಶ್ವರ ಮತ್ತು ಸಪರಿವಾರ ಗುಡಿಯಲ್ಲಿ ಶುಕ್ರವಾರ ನಾಗಬ್ರಹ್ಮ ಸಪರಿವಾರ ಪುನರ್ ಪ್ರತಿಷ್ಠೆ, ನೂತನ ನಾಗಶಿಲಾ ಪ್ರತಿಷ್ಠೆ, ನವಕ ಪ್ರಧಾನ ಹೋಮ, ಆಶ್ಲೇಷಾ ಬಲಿ ಮತ್ತು ಅನ್ನ ಸಂತರ್ಪಣೆ ಅರ್ಚಕ ಸುಬ್ರಹ್ಮಣ್ಯ ಹೇರಳೆ ನೇತ್ರತ್ವದಲ್ಲಿ ನಡೆಯಿತು. ಶತಾಯುಷಿ ಕೆ.ಪುಟ್ಟಣ್ಣ ಶೆಟ್ಟಿ ಮತ್ತು ಆಡಳಿತ ಮುಖ್ಯಸ್ಥ ಹೆಚ್. ಸಂಜೀವ ಪ್ರಭು, ಗುತ್ತಿಗೆದಾರ ಶಿವಪುರ ಶ್ರೀಧರ ಆಚಾರ್ಯ, ಶಿಲ್ಪಿ ಕೆ.ಪಿ.ಮಣಿ ಅವರನ್ನು ಗೌರವಿಸಲಾಯಿತು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಂಜುನಾಥ ಪೂಜಾರಿ, ಹೆಬ್ರಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ರಾಜೇಶ್ ಭಂಡಾರಿ, ಎಚ್. ಸದಾಶಿವ ಪ್ರಭು ಸಹಿತ ನೂರಾರು ಭಕ್ತ ಸಮೂಹ ಭಾಗವಹಿಸಿದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.