logo
WhatsApp Image 2026-04-02 at 14.46.04.jpeg
hindalco everlast.jpeg

ಹಟ್ಟಿಗೆ ನುಗ್ಗುವ ಗೊಕಳ್ಳ ರ ವಿರುದ್ದ ಹೋರಾಡಲು ಪ್ರತಿ ಮನೆಮನೆಯಲ್ಲು ಖಡ್ಗ ವನ್ನು ಇಟ್ಟು ಗೋಮಾತೆಯನ್ನು ರಕ್ಷಿಸಬೇಕಿದೆ: ಸಾಧ್ವಿ ಸರಸ್ವತಿ

ಟ್ರೆಂಡಿಂಗ್
share whatsappshare facebookshare telegram
12 Dec 2021
post image

ಕಾರ್ಕಳ: ಹಟ್ಟಿಗೆ ನುಗ್ಗುವ ಗೊಕಳ್ಳ ರ ವಿರುದ್ದ ಹೋರಾಡಲು ಪ್ರತಿ ಮನೆಮನೆಯಲ್ಲು ಖಡ್ಗ ವನ್ನು ಇಡಬೇಕಾಗಿದೆ , ಸೈನಿಕರ ಅವಹೇಳನ ಮಾಡುವ ದ್ರೋಹಿಗಳ ಮಟ್ಟಹಾಕಬೇಕಿದೆ .ಟಿಪ್ಪು ಸುಲ್ತಾನ್ ಪೂಜಿಸುವ ಕಾಂಗ್ರೆಸ್ ಸರಕಾರ ವನ್ನು ಕಿತ್ತು ಬಿಸಾಡಿ ದೇಶ ಸಂಸ್ಕೃತಿ ಗೌರವಿಸುವ ಸರಕಾರ ಚುನಾಯಿಸಬೇಕಿದೆ ಎಂದು ಸಾದ್ವಿ ಸರಸ್ವತಿ ಹೇಳಿದರು ಕಾರ್ಕಳ ವಿಶ್ವ ಹಿಂದೂ ಪರಿಷದ್ ಭಜರಂಗದಳ ಇದರ ವತಿಯಿಂದ ಕಾರ್ಕಳ ದ ಗಾಂಧಿ ಮೈದಾನದ ಅಮರ ಸೇನಾನಿ ಜನರಲ್ ಬಿಪಿನ್ ರಾವತ್ ವೇದಿಕೆಯಲ್ಲಿ ನಡೆದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣಮಾಡಿ. ರಾಜ್ಯದಲ್ಲಿ ಪ್ರಖರತೆಯ ಮತಾಂತರ , ಲವ್ ಜಿಹಾದ್ ,ಗೋರಕ್ಷಣಾ ಜಾರಿಗೆ ತನ್ನಿ ಎಂದು ಸರಕಾರ ವನ್ನು ಒತ್ತಾಯಿಸಿದರು

ಗೌರಿ ಗದ್ದೆ ದತ್ತಾಶ್ರಮದ ವಿನಯ ಗುರೂಜಿ ಮಾತನಾಡಿ ಕೇಸರಿ ಸನಾತನ ಧರ್ಮ ಹೊಂದಿರುವ ಸಂಕೇತ , ಸೃಷ್ಟಿ ಸರಿದೂಗಲು ಹಿಂದೂ ಧರ್ಮ ಉಳಿಯಲು ಸಂಘದ ಪಾತ್ರ ಮಹತ್ವ ವಾಗಿದೆ , ಕಲಿ ಕಲ್ಮಶ ತೊಳೆಯುವ ಕಾರ್ಕಳ ವಾಗಲಿ, ನಮ್ಮೂರೆ ನಮಗೆ ತೀರ್ಥ ಕ್ಷೇತ್ರ ವಾಗಬೇಕು ಗೋಮಾತೆ ವಿರುದ್ಧ ಹೋರಾಡುವ ಭಜರಂಗದಳದ ಭಕ್ತರ ಮೇಲಿನ ಕೇಸ ನ್ನು ರದ್ದುಗೊಳಿಸಲು ಸಹಿಸಂಗ್ರಹ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಿದ್ದೇನೆ ಎಂದು ಹೇಳಿದರು

ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಮಾತನಾಡಿ , ದೇಶದ ಸಂಸ್ಕೃತಿ ಯನ್ನು ರಕ್ಷಿಸುತ್ತಿರುವ ಸಂಘ ಕಾರ್ಯಕರ್ತರ ಅನನ್ಯ ಸೇವೆಯಿಂದ ತಲೆ ಎತ್ತಿ ಬಾಳುತಿದ್ದೆವೆ. ,ಶ್ರದ್ದಾ ಕೇಂದ್ರ ಗಳ ರಕ್ಷಣೆ ಗೆ ಗೋ ಮಾತೆಯ ರಕ್ಷಣೆಗೆ ಕಾನೂನಿನ ಚೌಕಟ್ಟಿನಲ್ಲಿ ರಕ್ಷಣೆ ಮಾಡೋಣ .ಕಾನೂನನ್ನು ಕೈಗೆತ್ತಿಕೊಳ್ಳಬೆಡಿ ಎಂದರು ಕಿವಿ‌ಮಾತು ಹೇಳಿದರು.

.

ಆನೆಗೊಂದಿ ಮಠದ ಕಾಳಹಸ್ತೆಂದ್ರ ಸ್ವಾಮೀಜಿ ಮಾತನಾಡಿ ದೇಶದಲ್ಲಿ ಸಂತರು ಶಾಂತಿ ಯನ್ನು ಹಂಚಿದವರು, ಆದರೆ ದೇಶದೊಳಗಿನ ದುಷ್ಟ ಶಕ್ತಿ ಗಳೆ, ಮತಾಂತರ ಭಯೋತ್ಪಾದನೆ ಹುಟ್ಟಿಸುತಿದ್ದಾರೆ.ಧರ್ಮಾಧರಿತ ಕಾನೂನನ್ನು ಕಿತ್ತೊಗೆದು ,ಸಮಾನ ಕಾನೂನು ಸಂಹಿತೆ ಜಾರಿಗೆ ತರಬೇಕು

ಕರ್ನಾಟಕ ವಿಶ್ವ ಹಿಂದೂ ಪರಿಷತ್ ನ ಎಂ.ಬಿಪುರಾಣಿಕ್ ಬೋಳ ಶ್ರಿನಿವಾಸ ಕಾಮತ್ , ಕಡ್ತಲ ವಿಶ್ವ ನಾಥ ಪೂಜಾರಿ , ಸುವೃತ್ ಕುಮಾರ್ ,ಆದಿಶಕ್ತಿ ಮಹಾಲಕ್ಷ್ಮಿ ದೇವಸ್ಥಾನ ಹಿರ್ಗಾನದ ಮೊಕ್ತೇಸರ ಅಶೋಕ್ ನಾಯಕ್ ಹಿರ್ಗಾನ, ಮಹೇಶ್ ಶೆಟ್ಟಿ ಕುಡುಪುಲಾಜೆ ,ಶರತ್ ಹೆಗ್ಡೆ ಬೆಳ್ಮಣ್ಣು, ಸುಂದರ್ ಬಿ ಹೊಸ್ಮಾರು , ಸುನೀಲ್ ಕೆ.ಆರ್ , ಭುಜಂಗ ಕುಲಾಲ್ , ಸುರೇಖ ರಾಜ್ , ವಿಷ್ಣುಮೂರ್ತಿ ಆಚಾರ್ಯ, ಸುರೇಂದ್ರ ಕೋಟೇಶ್ವರ , ಉಪಸ್ಥಿತರಿದ್ದರು.ಚೇತನ್ ಪೆರಲ್ಕೆ ಸ್ವಾಗತಿಸಿದರು

ಮನಸೆಳೆದ ವೈಭವದ ಶೋಭಯಾತ್ರೆ : ಕೇಸರಿ ಮಯಗೊಂಡ ಕಾರ್ಕಳ ಪೇಟೆಯ ಮುಖ್ಯ ರಸ್ತೆ ಯಲ್ಲಿ, ಯುವಕರು ಕೇಸರಿ ಶಾಲು , ಮಹಿಳೆಯರು ಕೇಸರಿ ಪೇಟ ತೊಟ್ಟು ಮೆರವಣಿಗೆ ಯಲ್ಲಿ ಸಾಗಿದರು , ಕಾರ್ಕಳ ಸ್ವರಾಜ್ಯ ಮೈದಾನದಿಂದ ಗಾಂಧಿ ಮೈದಾನದ ವರೆಗೆ ವೈಭವದ ಶೊಭಯಾತ್ರೆ ಯಲ್ಲಿ ಹೆಲಿಕಾಪ್ಟರ್ ದುರಂತದಲ್ಲಿ ಮಡಿದ ಬಿಪಿನ್ ರಾವತ್ ಹಾಗೂ ವೀರ ಸೇನಾನಿ ಗಳಿಗೆ ಶ್ರದ್ದಾಂಜಲಿ ಸಲ್ಲಿಸುವ ಸ್ಸ್ತಬ್ಧ ಚಿತ್ರ, ಧ್ಯಾನ ನಿರತ ಶಿವ , ಹನುಮಂತ ಮೂರ್ತಿ ,ದತ್ತ ಮೂರ್ತಿ, ಹೆಬ್ರಿ ಕಾರ್ಕಳ ತಾಲೂಕಿನ ಐವತ್ತಕ್ಕೂ ಹೆಚ್ಚು ಭಜನಾ ತಂಡಗಳು,ನಾಸಿಕ್ ಬ್ಯಾಂಡ್ ಗಳು ಶೋಭಯಾತ್ರೆಯುದ್ದಕ್ಕೂ ಮೆರವಣಿಗೆಯಲ್ಲಿ ಸಾಗಿದವು. ಸೂರ್ಯ ಪುರೋಹಿತ್ ಹನುಮಂತ ಚಿತ್ರಬಿಡಿಸಿದರು ಜಗದೀಶ್ ಪುತ್ತೂರು ಸಂಗೀತ ಕಾರ್ಯಕ್ರಮ ನಹೇಳಿದರು

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.