



ಸುರಿಯುತಿದೆ ಮಳೆ... ಭೂರಮೆಯ ತೊಳೆಯಲು ಕೊಳೆ...
ಬಣ್ಣವ ಪಡೆಯಿತು ಹೊಳೆ ಅಹಾ ! ಭೂಮಿಗಿಂದು ಸ್ವರ್ಗದ ಕಳೆ......
ಗಡಗಡ ಗುಡುಗುವ ಆಗಸ , ಓಟಕಿತ್ತ ಮೋಡಗಳ ರಭಸ , ಚಟ್ಟನೆ ಸಿಡಿಯುವ ಸಿಡಿಲು, . ಅಹಾ ! ನಭಕ್ಕಿದು ಸ್ವರ್ಗದ ಕಳೆ ..
ಹೊದಿಸಿದೆ ಭುವಿಗೆ ಹಸಿರಿನ ಸೀರೆ , ಹೊದ್ದುಮಲಗಿದ ಸೌಂದರ್ಯವ ಕಂಡು ನಕ್ಕಳು ನೀರೇ ಗುನುಗುವ ಕೀಟಗಳ ಕಂಪು, ಸಂತಸದಿ ಪುಟಿಯುವ ಹಸುಗಳ ಗುಂಪು, ಅಹಾ! ಮನಸಾರೆ ಸವಿಯೋಣ ಬಾರೆ ,
ಮನದಾಳದಲಿ ಮೂಡಿದೆ ಪ್ರಶ್ನೆಯೊಂದು , ಪ್ರಸ್ತಾಪಿಸಲೆ ನಿಮ್ಮೆದುರು ನಾನಿಂದು , ಎಲ್ಲಾ ಕೊಳೆಯನು ತೊಳೆವ ಮಳೆ , ತೊಳೆಯಿತೇ .... ಮಾನವನ ಅಂತರಂಗದ ಕೊಳೆ
......ಜಿ.ಪಿ.ಕೆ
ಜಿ.ಪಿ.ಕೆ ಎಂದು ಕರೆಯಲ್ಪಡುವ ಲೇಖಕ. ಡಾ. ಗುರುಪ್ರಸಾದ್ ಕಳ್ತೂರು . ಇವರು ಮೂಲತಃ ಹೆಬ್ರಿ ತಾಲೂಕಿನ ಕಳ್ತೂರು ಪ್ರದೇಶದವರು. ಪ್ರಸ್ತುತ ಮಣಿಪಾಲದಲ್ಲಿ ವೈದ್ಯರಾಗಿದ್ದು ಬರಹದಲ್ಲಿ ಅತಿ ಆಸಕ್ತಿ. ಹವ್ಯಾಸಿ ಹಾಡುಗಾರರು ,ಛಾಯಾಗ್ರಾಹಕ, ಚಾರಣಿಗರು ಕೂಡ . ಪರಿಸರ ಪ್ರೇಮಿಯಾಗಿ ಗುರುತಿಸಿಕೊಂಡವರು
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.