



ಅಜೆಕಾರು : ರಾಜ್ಯ ಸಂಘಟನೆಯಾಗಿರುವ ಆಂದ್ರಪ್ರದೇಶ ಹೊಟೇಲು ಮಾಲಕರ ಸಂಘದ (APHA) ಪ್ರಧಾನ ಕಾರ್ಯದರ್ಶಿಯಾಗಿ ದೋಂಡೆರಂಗಡಿಯ ಐ.ರಘುವೀರ ಶೆಣೈ ಅವರು ಆಯ್ಕೆಯಾಗಿದ್ದಾರೆ. ಅವರು ಆಂದ್ರಪ್ರದೇಶ ರಾಜ್ಯದ ನಂದ್ಯಾಲದಲ್ಲಿ ಹೊಟೇಲು ಉದ್ಯಮಿಯಾಗಿದ್ದಾರೆ. ನಂದ್ಯಾಲದಲ್ಲಿ ಸಾಮಾಜಿಕ ಚಟುವಟಿಕೆಗಳ ಮೂಲಕ ಗಮನ ಸೆಳೆದಿರುವರು. ಊರಿನ ಚಟುವಟಿಕೆಗಳ ಬಗ್ಗೆಯೂ ಆಸಕ್ತರಾಗಿದ್ದಾರೆ. ಅಲ್ಲಿ ಕನ್ನಡಿಗರ ಸಂಘಟನೆ ಮಾಡಿ ಮುನ್ನಡೆಸುತ್ತಿದ್ದಾರೆ. ಬೈರಂಪಳ್ಳಿ ನಡಿಬೆಟ್ಟು ಕೃಷ್ಣ ಶೆಣೈ ಮತ್ತು ರಾಧಾ ಶೆಣೈ ದಂಪತಿಯ ಪುತ್ರರಾಗಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.