



ಕಾರ್ಕಳ ಪುರಸಭೆ ಎದುರು ಇರುವ ಶ್ರೀನಿವಾಸ ಗ್ಲಾಸ್ ಹತ್ತಿರ ನಿಲ್ಲಿಸಿದ್ದ ಬೈಕ್ ಕಳವು ಗೈದಿರುವ ಘಟನೆ ನಡೆದಿದೆ. ಕುಂದಾಪುರ ಮೂಲದ ಪ್ರಭಾಕರ ಎಂಬುವವರು ಬೈಕ್ ಕಳೆದುಕೊಂಡವರು.
ಇವರು ಎ.28 ರಂದು KA-20-EV-3741 ನೇ ನೋಂದಣಿ ಸಂಖ್ಯೆಯ ಹೊಂಡಾ ಡಿಯೋ ಡಿಎಲ್ಎಕ್ಸ್ ಸ್ಕೂಟರ್ ನಲ್ಲಿ ಕಾರ್ಕಳಕ್ಕೆ ಬಂದು ಕಾರ್ಕಳ ಪುರಸಭೆ ಎದುರು ಇರುವ ಶ್ರೀನಿವಾಸ ಗ್ಲಾಸ್ ಹತ್ತಿರ ಬೆಳಗ್ಗೆ ನಿಲ್ಲಿಸಿ ಸ್ಕೂಟರ್ ಕೀಯನ್ನು ಅದರಲ್ಲಿಯೇ ಬಿಟ್ಟು ಗ್ಲಾಸ್ ಅಂಗಡಿಗೆ ಹೋಗಿ 10:55 ಗಂಟೆಗೆ ವಾಪಾಸು ಬಂದು ನೋಡಿದಾಗ ಬೈಕ್ ಕಾಣೆಯಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.