



ಕಾರ್ಕಳ: ನವಜಾತ ಶಿಶುವಿನ ಮೃತದೇಹ ಪತ್ತೆಯಾದ ಘಟನೆ ಪತ್ತೊಂಜಿಕಟ್ಟೆ ಕಿರಿ ಸೇತುವೆ ಸಮೀಪ ಜೂ 21 ರ ಸಂಜೆ ನಡೆದಿದೆ.
ಸ್ಥಳೀಯರು ನಡೆದುಕೊಂಡು ಕಾರ್ಕಳದ ಕಡೆಗೆ ಹೋಗುತಿದ್ದ ವೇಳೆ ರಸ್ತೆ ಪಕ್ಕದ ತೋಡಿನಲ್ಲಿ ಹೆಣ್ಣು ಮಗುವೊಂದು ತೇಲುತ್ತಿರುವುದನ್ನು ಕಂಡುಬಂದಿದೆ. ಸ್ಥಳೀಯರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸ್ ಹಾಗೂ ಆರೋಗ್ಯ ಇಲಾಖೆಯವರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ .ಮೃತದೇಹವನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಮಣಿಪಾಲಕ್ಕೆ ರವಾನಿಸಿದ್ದಾರೆ..ಕಾರ್ಕಳ ನಗರ ಠಾಣೆಯ ಪೋಲೀಸ್ ರು ತನಿಖೆ ನಡೆಸುತಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.