



ಅನುಷಾ ಪತ್ರಿಕೋಧ್ಯಮ ವಿಭಾಗ ಎಂ ಪಿ ಎಂ ಕಾಲೇಜು ಕಾರ್ಕಳ
ಇತ್ತೀಚಿನ ದಿನಗಳಲ್ಲಿ ಮನುಷ್ಯ ಮತ್ತು ವನ್ಯ ಜೀವಿಗಳಲ್ಲಿ ಸಂಘರ್ಷ ಹೆಚ್ಚುತ್ತಿದೆ. ಅದರಲ್ಲೂ ಕೂಡ ಹಲವರು ವನ್ಯಜೀವಿಗಳು ಸಾವನ್ನಪ್ಪುತಿದೆ. ಅದರಲ್ಲೂ ಕಾರ್ಕಳ ತಾಲೂಕು ವ್ಯಾಪ್ತಿಯಲ್ಲಿ ಆಹಾರ ಹುಡುಕುತ್ತಾ ನಾಡಿ ಬರುವ ಪ್ರಾಣಿಗಳು ಅರಣ್ಯ ಇಲಾಖೆಯ ಬೋನುಗಳಲ್ಲಿ ಸೆರೆಸಿಕ್ಕಿವೆ. ಕಾರ್ಕಳ ತಾಲೂಕಿನಲ್ಲಿ ಕಳೆದ 4ವರ್ಷಗಳಲ್ಲಿ 7 ಚಿರತೆಗಳು 1 ಕಾಟಿ ಸೆರೆ ಸಿಕ್ಕಿದ್ದು ಮತ್ತು ಸತ್ತ ಚಿರತೆ 3ಮತ್ತು ಕಾಟಿಗಳು 3 ಮೃತಪಟ್ಟಿವೆ ಎಂದು ಅರಣ್ಯ ಇಲಾಖೆ ತಿಳಿಸಿದೆ
ಅರಣ್ಯ ಇಲಾಖೆಯಲ್ಲಿ ಚಿರತೆ ಬಗ್ಗೆ ರಕ್ಷಣಾ ಕ್ರಮಗಳು: ಕಬ್ಬಿಣದ 6 ಗೂಡುಗಳಿದ್ದು ಚಿರತೆ ಹಾವಳಿ ಇರುವ ಪ್ರದೇಶದಲ್ಲಿ ಚಿರತೆ ಹಿಡಿಯುವ ಗೂಡು ಇಟ್ಟು ಸುರಕ್ಷಿತವಾಗಿ ಸೆರೆ ಹಿಡಿದು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುವುದು.
ಚಿರತೆಗಳು ಸಾಮಾನ್ಯವಾಗಿ ರಾತ್ರಿ ಸಮಯದಲ್ಲಿ ನಾಯಿಗಳನ್ನು ಹಿಡಿಯಲು ಜನವಸತಿ ಪ್ರದೇಶಕ್ಕೆ ದಾಳಿ ಮಾಡುವಾಗ ಬಾವಿಗೆ ಬೀಳುವ ಪ್ರಕರಣಗಳು ಹೆಚ್ಚು ಇದಕ್ಕೆ ಬಲೆಗೂಡುಗಳನ್ನು ಮತ್ತು ಅರಿವಿಳಿಕೆ ತಜ್ಞರ ಸಹಾಯ ದಿಂದ ರಕ್ಷಿಸಲಾಗುತ್ತದೆ.
ಅರಣ್ಯ ಇಲಾಖೆ ಕಾರ್ಕಳ ವಲಯದಲ್ಲಿ ಸಂಬಂಧಿಸಿದಂತೆ ಸುಮಾರು ಕೆರೆಗಳನ್ನು ದುರಸ್ತಿ ಗೊಳಿಸಿದ್ದು ಮುಂದಿನ ಬೇಸಿಗೆ ಕಾಲದಲ್ಲಿ ಕಾಡುಪ್ರಾಣಿಗಳಿಗೆ ಕುಡಿಯಲು ಯೋಗ್ಯವಾದ ನೀರು ಸಿಗಬೇಕು ಎನ್ನುವುದು ಅರಣ್ಯ ಇಲಾಖೆಯ ಆಶಯ. ಸಹಜವಾಗಿ ಹರಿಯುವ ತೋಡು ಗಳು ನದಿಗಳ ಹೊಂಡದಲ್ಲಿ ನೀರಿನ ಸೆಲೆಯು ಹೆಚ್ಚಿದೆ. ಹಲವರು ಅರಣ್ಯಗಳನ್ನು ನಾಶ ಗೊಳಿಸುತ್ತಿದ್ದಾರೆ ಇದರಿಂದಾಗಿ ಪ್ರಾಣಿಗಳು ಕಾಡಿನಿಂದ ನಾಡಿಗೆ ವಲಸೆ ಬರುವಂತಾಗಿದೆ. ಇದರಿಂದಾಗಿ ಮಾನವ ಕುಲಕು ಕೂಡ ಹಲವಾರು ರೀತಿಯ ತೊಂದರೆಗಳು ಎದುರಾಗಬಹುದು. ತೊಂದರೆಗಳು: ಕಾಡುಗಳನ್ನು ಕಡೆದು ರಸ್ತೆ ನಿರ್ಮಾಣ ವಾದ ಕಾರಣ ತಮ್ಮ ಹೆಜ್ಜೆಯನ್ನು ನಾಡಿನ ಕಡೆ ಪಯಣ ಬೆಳೆಸುತ್ತಿದೆ. ಇದರಿಂದಾಗಿ ರೋಡಿನಲ್ಲಿ ಹಲವರು ರೀತಿಯ ವನ್ಯ ಜೀವಿಗಳು ರಸ್ತೆಯಲ್ಲಿ ಸಿಕ್ಕಿಕೊಂಡು ಒದ್ದಾಡುವುದನ್ನು ಕಾಣಬಹುದಾಗಿದೆ. ಇದರಿಂದ ಅಪಘಾತಗಳು ಜೀವ ಹಾನಿಯಾಗುವುದನ್ನು ಕಾಣಬಹುದಾಗಿದೆ. ಇದಕ್ಕೆ ಮುಖ್ಯ ಕಾರಣವಾದದ್ದು ಕಾಡುಗಳ ನಾಶದಿಂದ ಎನ್ನಬಹುದಾಗಿದೆ.
ಪರಿಹಾರ ಕ್ರಮ :: ಪ್ರಾಣಿಗಳನ್ನು ಬೇಟೆ ಮಾಡುವವರಿಗೆ ಕಾನೂನು ಕ್ರಮ ಕೈಗೊಳ್ಳುವುದು. ಕಾಡಿನ ಅರಿವು ಮೂಡಿಸುವುದು ಮುಖ್ಯ .ಕಾಡಿನಲ್ಲಿ ಯಾರು ಪ್ರವೇಶಿಸದಂತೆ ಎಚ್ಚರ ವಹಿಸಬೇಕು. ಬಿಗಿಯಾದ ಕಾನೂನು ನಿಯಂತ್ರಣ ಗಳು ಅಗತ್ಯ ವಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.