



ಕಾರ್ಕಳ: ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಹಳೆ ವಿದ್ಯಾರ್ಥಿಗಳಾದ ಸವಿತಾ ಶೆಣೈ ಮತ್ತು ತೇಜಸ್ ಆಚಾರ್ಯ ಇವರು ಐ.ಸಿ.ಎ.ಐ ನಡೆಸಿದ ಸಿ.ಎ.ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಕಾಲೇಜಿಗೆ ಹಾಗೂ ತಮ್ಮ ಪೋಷಕರಿಗೆ ಕೀರ್ತಿಯನ್ನು ತಂದಿರುತ್ತಾರೆ. ಕಾರ್ಕಳದ ನಿವಾಸಿ ಕು.ಸವಿತಾ ಶೆಣೈ ಇವರು ಶ್ರೀ ಸುರೇಶ್ ಶೆಣೈ ಅಲೆವೂರು ಮತ್ತು ವಿದ್ಯಾವತಿ ಎಸ್. ಶೆಣೈ ದಂಪತಿಗಳ ಸುಪುತ್ರಿ ಹಾಗೂ ತೇಜಸ್ ಆಚಾರ್ಯ ನೆಲ್ಲಿಗುಡ್ಡೆಯ ಕುಕ್ಕುಂದೂರು ನಿವಾಸಿ ಶ್ರೀ ಲಕ್ಮೀ ನಾರಾಯಣ ಆಚಾರ್ಯ ಮತ್ತು ಶ್ರೀಮತಿ ಶಾರದಾ ಆಚಾರ್ಯ ದಂಪತಿಗಳ ಸುಪುತ್ರ. ಇವರ ಸಾಧನೆಗೆ ಅಜೆಕಾರ್ ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿಯವರು ಮೆಚ್ಚುಗೆ ವ್ಯಕ್ತಪಡಿಸುವುದರೊಂದಿಗೆ, ಆಡಳಿತ ಮಂಡಳಿ ಹಾಗೂ ಸಂಸ್ಥೆಯ ವಾಣಿಜ್ಯ ವಿಭಾಗ ಸಹಿತ ಜ್ಞಾನಸುಧಾ ಪರಿವಾರವು ಹರ್ಷವ್ಯಕ್ತಪಡಿಸಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.