logo
WhatsApp Image 2026-04-02 at 14.46.04.jpeg
hindalco everlast.jpeg

ಕಾರ್ಕಳ: : ಲಕ್ಷ್ಮೀಪುರ ಬ್ರಹ್ಮಕಲಶೋತ್ಸವ: ಆಮಂತ್ರಣ ಪತ್ರಿಕೆ ಬಿಡುಗಡೆ

ಟ್ರೆಂಡಿಂಗ್
share whatsappshare facebookshare telegram
31 Mar 2025
post image

ಕಾರ್ಕಳ:ಬ್ರಹ್ಮಕಲಶೋತ್ಸವ ಎನ್ನುವುದು ಸಮಾಜದ ಹಾಗು ನಾಡಿನ‌ ಬೆಳವಣಿಗೆ ಸಹಕಾರಿಯಾಗಿದೆ . ದೇವರ ಅರಾಧನೆ ಹಾಗು ದೆವಾಲಯಗಳ ಅಭಿವೃದ್ದಿ ಸಮಾಜದ ಸರ್ವತೊಮುಖ ಅಭಿವೃದ್ದಿಯ ಪ್ರತಿಕವಾಗಿದೆ ಎಂದು ವೇದಮೂರ್ತಿ ಜಗದೀಶ್ ಭಟ್ ಅವರು ತಿಳಿಸಿದರು. ಅವರು ಕಾರ್ಕಳದ ಹಿರ್ಗಾನದ ಲಕ್ಷ್ಮೀಪುರ ಶ್ರೀ ಆದಿಶಕ್ತಿ ಮಹಾಲಕ್ಷ್ಮೀ ದೇವಸ್ಥಾನದ ಪುನರ್ ಪ್ರತಿಷ್ಠೆ, ಅಷ್ಟಬಂದ ಸಹಸ್ರ ಕಲಶ ಬ್ರಹ್ಮಕಲಶಾಭಿಷೇಕ ಮತ್ತು ಸಹಸ್ರ ಚಂಡಿಕಾಯಾಗ ಮತ್ತು ವರ್ಧಂತ್ಯುತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ಸನಾತನ ಧರ್ಮದ ಅಚರಣೆಗಳು ಹಾಗು ಸಂಸ್ಕಾರಗಳು ನಮ್ಮನ್ನು ಉತ್ತಮ ಕಾರ್ಯದೆಡೆಗೆ ಪ್ರೇರೇಪಿಸುತ್ತವೆ. ಎಂದರು.

ಈ ಸಂದರ್ಭದಲ್ಲಿ ಆಡಳಿತ ಮೊಕ್ತೇಸರರಾದ ಪಾಂಡುರಂಗ ನಾಯಕ್ ಮಾತನಾಡಿ ಬ್ರಹ್ಮಕಲಶೋತ್ಸವದ ಕಾರ್ಯಗಳು ಉತ್ತಮವಾಗಿ ನಡೆದು , ಸಮಾಜದ ಏಳಿಗೆಯಾಗಲಿ, ಮೇ.6 ರಿಂದ 12 ವರೆಗೆ ನಡೆಯುವ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ದಲ್ಲಿ ಸಮಾಜಬಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದರು

ಪ್ರಕಾಶ್ ಪ್ರಭು ಕಡ್ತಲ ಮಾತನಾಡಿದರು.,ಸತೀಶ್ ಅಂಬೇಲ್ಕರ್,ರಾಮದಾಸ್ ನಾಯಕ್ ಮಿಯ್ಯಾರು,ಹಾಡಿಮನೆ ಸುರೇಂದ್ರ ನಾಯಕ್ ಅಶೋಕ್ ನಾಯಕ್ ಹಿರ್ಗಾನ,ಸದಾಶಿವ ಪ್ರಭು ಕಡ್ತಲ ಉಪಸ್ಥಿತರಿದ್ದರು. ನಿತ್ಯಾನಂದ ನಾಯಕ್ ಕಾರ್ಯಕ್ರಮ ನಿರೂಪಿಸಿದರು.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.