



ಕಾರ್ಕಳ : ಇತ್ತೀಚಿಗೆ ಸಿಡಿಲು ಆಘಾತದಿಂದ ಮೃತ ಪಟ್ಟ ನೂರಾಳ್ ಬೆಟ್ಟು ಗ್ರಾಮದ ಜಾಣ ಮನೆ ಜಿಗಿತ್ ಜೈನ್ ರವರ ಮನೆಗೆ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ವಿ ಸುನಿಲ್ ಕುಮಾರ್ ಭೇಟಿ ನೀಡಿ ಪ್ರಾಕೃತಿಕ ವಿಕೋಪ ಪರಿಹಾರ ನಿಧಿಯಡಿ ಸರ್ಕಾರದ ಅನುದಾನ ರೂ.5 ಲಕ್ಷದ ಚೆಕ್ ವಿತರಣೆ ಮಾಡಿದರು ಮತ್ತು ಮೃತರ ತಂದೆ - ತಾಯಿಯವರಿಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಈದು ಗ್ರಾ.ಪಂ ಅಧ್ಯಕ್ಷರಾದ ಶ್ರೀಮತಿ ಜಯಂತಿ, ನಿಕಟ ಪೂರ್ವ ಅಧ್ಯಕ್ಷ ಹಾಗೂ ಹಾಲಿ ಸದಸ್ಯರಾದ ಪುರುಷೋತ್ತಮ ಎಚ್, ತಹಸೀಲ್ದಾರ್ ಪ್ರದೀಪ್ಕುರ್ಡೆಕಾರ್ ಗ್ರಾಮಾಂತರ ಠಾಣಾಧಿಕಾರಿ ತೇಜಸ್ವಿ, ಕಂದಾಯ ನಿರೀಕ್ಷಕರಾದ ಶಿವಪ್ರಸಾದ್, ಗ್ರಾಮ ಕರಣಿಕರಾದ ಬಾಲಕೃಷ್ಣ ಹಾಗೂ ಇನ್ನಿತರು ಉಪಸ್ಥಿತಿದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.