



ಕಾರ್ಕಳ: ಅನಾರೋಗ್ಯದಿಂದ ಬಳಲುತ್ತಿದ್ದ ವಿದ್ಯಾರ್ಥಿನಿಯೋರ್ವಳು ಮೃತಪಟ್ಟಿರುವ ಘಟನೆ ಫೆ. 29ರಂದು ಸಂಭವಿಸಿದೆ.
ಪೊಲ್ಲಾರ್ ಗ್ರಾಮದ ರಾಜೇಶ್ ಆಚಾರ್ಯ ಅವರ ಮಗಳು ತನುಶ್ರೀ (13) ಮೃತ ದುರ್ದೈವಿ. ಈಕೆ ಶ್ರೀಮದ್ ಭುವನೇಂದ್ರ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಕಳೆದ ಕೆಲ ದಿನಗಳಿಂದ ಚಿಕನ್ ಫಾಕ್ಸ್ನಿಂದ ಬಳಲುತ್ತಿದ್ದು, ಫೆ. 29ರ ರಾತ್ರಿ ಮೃತಪಟ್ಟಿರುತ್ತಾಳೆ.
ಮೃತ ವಿದ್ಯಾರ್ಥಿನಿ ತಂದೆ ತಾಯಿ ಮತ್ತು ಓರ್ವ ಸಹೋದರಿಯನ್ನು ಅಗಲಿದ್ದಾಳೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.