



ಕಾರ್ಕಳ: ದ್ವಿಚಕ್ರ ವಾಹನಗಳೆರಡು ನಗರದ ಗೋಮಟಬೆಟ್ಟ ಕ್ರಾಸ್ನ ಗ್ಯಾಸ್ ಗೋಡೌನ್ ಬಳಿ ಡಿಕ್ಕಿಯಾಗಿ ಸವಾರರು ಗಾಯಗೊಂಡ ಘಟನೆ ನಡೆದಿದೆ.
ಕಾರ್ಕಳದಿಂದ ತಾಲ್ಲೂಕಿನ ಮಿಯಾರು ಕಡೆಗೆ ತೆರಳುತ್ತಿದ್ದ ಸಂತೋಷ ಎನ್ನುವವರ ದ್ವಿಚಕ್ರವಾಹನ ಹಾಗೂ ಮಿಯಾರು ಕಡೆಯಿಂದ ಅಬ್ಬು ಸಾಹೇಬ್ ಎನ್ನುವವರು ಸವಾರಿ ಮಾಡಿಕೊಂಡು ಬರುತ್ತಿದ್ದ ಬಜಾಜ್ ಪಲ್ಸರ್ಗೆ ಬುಧವಾರ ಡಿಕ್ಕಿಯಾದ ಪರಿಣಾಮ ಅಬ್ಬು ಸಾಹೇಬ್ ಎನ್ನುವವರ ತಲೆಗೆ, ಮುಖಕ್ಕೆ ಹಾಗೂ ಕೈಕಾಲುಗಳಿಗೆ ರಕ್ತಗಾಯವಾಗಿದ್ದು ಸಂತೋಷ ಎನ್ನುವವರಿಗೆ ಬೆರಳಿಗೆ ರಕ್ತಗಾಯವಾಗಿರುತ್ತದೆ
ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.