



ಕಾರ್ಕಳ: ಕುಡಿತದ ಚಟ ಹೊಂದಿದ್ದ ವ್ಯಕ್ತಿಯೊಬ್ಬರು ಅನಾರೋಗ್ಯಕ್ಕೊಳಗಾಗಿ ನಂತರ ಮೃತಪಟ್ಟ ಘಟನೆ ಮೇ. 26ರಂದು ನಡೆದಿದೆ. ತಾಲೂಕಿನ ಜಾರ್ಕಳದ ರಜಿಯಾ ಕಂಪೌಂಡ್ನ ನಿವಾಸಿ ಶಿವಪ್ಪ ಚಿತ್ರಗಿ(39) ಮೃತಪಟ್ಟವರು. ಇವರು ಲತೇಶ್ ಶೆಟ್ಟಿ (34) ಅವರ ಬಳಿ ಟಿಪ್ಪರ್ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದರು. ಶಿವಪ್ಪ ಅನಾರೋಗ್ಯದಿಂದ ಮಲಗಿಕೊಂಡಿದ್ದು ಮಾತನಾಡುತ್ತಿಲ್ಲ ಎಂಬುವುದಾಗಿ ನೆರೆಮನೆಯವರು ಕರೆ ಮಾಡಿ ತಿಳಿಸಿದ ಹಿನ್ನೆಲೆಯಲ್ಲಿ ಲತೇಶ್ ಶೆಟ್ಟಿ ಸ್ಥಳಕ್ಕೆ ಬಂದು ನೋಡಿದಾಗ ಶಿವಪ್ಪ ಮೃತಪಟ್ಟಿರುವುದುದೆ. ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.