



ಉಡುಪಿ: ನಗರದ ಗೀತಾಂಜಲಿ ಶಾಪರ್ ಸಿಟಿ ಯಲ್ಲಿರುವ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ನ ಮಳಿಗೆಯಲ್ಲಿ ಮೈನ್ ವಜ್ರಾಭರಣದ ನವೀನ ಸಂಗ್ರಹ ವಾದ "ಸ್ಪಾರ್ಕಲ್ ಆಫ್ ಹೆವೆನ್" ಸಂಗ್ರಹವನ್ನು ಅನಾವರಣ ಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಕಲರ್ಸ್ ಕನ್ನಡದ ಮಜಾ ಭಾರತ ಖ್ಯಾತಿಯ ಆರಾಧನ ಭಟ್,ಸರಹ ಫೆರ್ನಾಂಡೀಸ್, ಹಂಸಿಕ ರವರು ಅನಾವರಣಗೊಳಿಸಿದರು.
ಸಿಬ್ಬಂದಿ ಸುಮಿತ್ ಮಾತನಾಡಿ ಆಧುನಿಕ ಮಹಿಳೆಗಾಗಿ ತಯಾರಿಸಿದ ಅದ್ಭುತ ಸಂಗ್ರಹವು ಸಂಕೀರ್ಣ ವಜ್ರಗಳ ಸಾಮರಸ್ಯದ ಸಂಯೋಜನೆಯನ್ನು ಪ್ರದರ್ಶಿಸುತ್ತದೆ, ವಿವಿಧ ಆಕಾರಗಳ ವಿಶಿಷ್ಟ ವಜ್ರಗಳನ್ನು ಸಂಯೋಜಿತ ವಿನ್ಯಾಸದಲ್ಲಿ ಕೌಶಲದಿಂದ ಸಮಯೋಜಿಸಿದ ಆಭರಣಗಳು ಸಂಗ್ರಹದಲ್ಲಿದ್ದು ,ಸಾಲಿಟೇರ್ ದೊಡ್ಡದಾಗಿ ಮತ್ತು ಆಕರ್ಷವಾಗಿ ಕಾಣುವಂತೆ ಮಾಡುತ್ತದೆ. ಈ ಸಂಗ್ರಹದಲ್ಲಿರುವ ಪ್ರತಿಯೊಂದು ಆಭರಣವು ಸ್ವರ್ಗೀಯ ಆಕರ್ಷಯಣೆಯಾಗಿದೆ ಮತ್ತು ಧರಿಸುವ ಪ್ರತಿ ಮಹಿಳೆಯ ಸೊಬಗನ್ನು ಅಲೌಕಿಕವಾಗಿಸುತ್ತದೆ. ಕೇವಲ ರೂ 30,000 ದಿಂದ ಆರಂಭವಾಗುವ ಬೆಲೆಗಳನ್ನು ಈ ಅಸಾಧಾರಣ ಆಭರಣಗಳು ಲಭ್ಯವಿದೆ ಎಂದರು. 28 ಹಂತದ ಗುಣಮಟ್ಟ ಪರೀಕ್ಷಿಸಿದ ,IGI ಪ್ರಮಾಣೀಕೃತ ,100% ವಿನಿಮಯ ಮೌಲ್ಯ ಹಾಗೂ ಬೈಬಾಕ್ ಗ್ಯಾರಂಟಿ, ಜೀವನ ಪರ್ಯಂತ ಉಚಿತ ನಿರ್ವಹಣೆ ಹಾಗೂ ಉಚಿತ ವಿಮೆ ಯಂತಹ ಸೌಲಭ್ಯವನ್ನು ಒದಗಿಸಲಾಗಿದೆ.
ಚಾಲನೆಯ ಬಗ್ಗೆ ಪ್ರತಿಕ್ರಿಹಿಸಿದ ಶಾಖಾ ಮುಖ್ಯಸ್ಥರಾದ ಹಫೀಝ್ ರೆಹಮಾನ್ ನಮ್ಮ ಗೌರವಾನ್ವಿತ ಗ್ರಾಹಕರಿಗೆ "ಸ್ಪಾರ್ಕಲ್ ಆಫ್ ಹೆವೆನ್" ಸಂಗ್ರಹವನ್ನು ಪರಿಚಹಿಸಲು ನಾವು ರೋಮಂಚನಗೊಂಡಿದ್ದೇವೆ.ಗುಣಮಟ್ಟದಲ್ಲಿ ರಾಜಿ ಇಲ್ಲದೆ ವಜ್ರಾಭರಣಗಳು ಕಡಿಮೆ ಬೆಲೆಗೆ ಒದಗಿಸಿ ಗ್ರಾಹಕರ ವಿಶ್ವಾಸವನ್ನು ಗೆಲ್ಲುತ್ತಿದೆ, ವಿಶ್ವಾದ್ಯಂತ ಆಭರಣದಲ್ಲಿ ಆಸಕ್ತರಾಗಿರುವವರ ಆಸೆಗಳನ್ನು ಪೂರೈಸುತ್ತದೆ ಎಂದರು.
ಕ್ರಾಯಕ್ರಮದಲ್ಲಿ ಗ್ರಾಹಕರು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ವಿಘ್ನೇಶ್ ಕ್ರಾಯಕ್ರಮವನ್ನು ನಿರೂಪಿಸಿ ವಂದಿಸಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.