



ಕಾರ್ಕಳ : ಲಯನ್ಸ್ ಕ್ಲಬ್ ಕಾರ್ಕಳ ಸಿಟಿ ವತಿಯಿಂದ ಕಾರ್ಕಳ ನಗರ ಪೊಲೀಸ್ ಠಾಣೆಗೆ ಸಿಸಿಟಿವಿಯನ್ನು ಕೊಡುಗೆಯಾಗಿ ನೀಡಲಾಯಿತು. ಪೊಲೀಸ್ ಠಾಣೆ ಮನವಿ ಮೇರೆಗೆ ಜೋಡುರಸ್ತೆಗೆ ಹಾಗೂ ಸಾಣೂರು ಗ್ರಾ.ಪಂ. ಸದಸ್ಯ ಕರುಣಾಕರ್ ಕೋಟ್ಯಾನ್ ಮನವಿ ಮೇರೆಗೆ ಸಾಣೂರು ಮುರತ್ತಂಗಡಿಗೆ ಅಳವಡಿಸಲು ಸಿಸಿಟಿವಿ ನೀಡಲಾಗಿದ್ದು ನ. 12ರಂದು ಪೊಲೀಸ್ ಠಾಣೆಯಲ್ಲಿ ಸಿಸಿಟಿವಿ ಹಸ್ತಾಂತರ ಮಾಡಲಾಯಿತು. ಲಯನ್ಸ್ ಕ್ಲಬ್ ಕಾರ್ಕಳ ಸಿಟಿ ಅಧ್ಯಕ್ಷೆ ಜ್ಯೋತಿ ರಮೇಶ್, ಚಂದ್ರಹಾಸ ಸುವರ್ಣ, ಉಧ್ಯಮಿ ಎಸ್. ನಿತ್ಯಾನಂದ ಪೈ, ವನಿತಾ ವಿಶ್ವನಾಥ್,ಪೂಣೀಮಾ ರವಿಪ್ರಕಾಶ್ ಪ್ರಭು, ಯೋಗೀಶ್ ನಾಯಕ್, ಗೋಪಾಲ್ ಅಂಚನ್ ವಿಜಯ್ ಪ್ರಕಾಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.