



ಬೈಂದೂರು: ಮೀನುಗಾರಿಕೆ ನಡೆಸುವಾಗ ಆಯತಪ್ಪಿ ಸಮುದ್ರ ಕ್ಕೆ ಬಿದ್ದು ಬಲೆಗೆ ಸಿಲುಕಿ ಮೀನುಗಾರ ಮೃತಪಟ್ಟ ಘಟನೆ ಬೈಂದೂರು ಶೀರೂರು ಅಳಿವೆಗದ್ದೆ ಕೈಸನಮನೆ ಬಳಿ ನಡೆದಿದೆ. ಮಂಜು ಮೊಗೇರ(65) ಮೃತಪಟ್ಟವರು. ಶಿರೂರು ಅಳಿವೆಗದ್ದೆ ಸಮುದ್ರದಲ್ಲಿ ಮೀನುಗಾರಿಕೆ ನಡೆಸುವ ಸಮಯ ಜೋರಾಗಿ ಗಾಳಿ ಬೀಸಿದ ಕಾರಣ ಪಾತಿದೋಣಿಯಲ್ಲಿದ್ದ ಬಲೆಯು ಅವರ ಕಾಲಿಗೆ ಸಿಕ್ಕಿ ಆಯತಪ್ಪಿ ಸಮುದ್ರಕ್ಕೆ ಬಿದ್ದು ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಮೃತಪಟ್ಟಿದ್ದಾರೆ .ಬೈಂದೂರು ಪೋಲಿಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.