



ಹಾಸನ: ರೇಷ್ಮಾ ಶೆಟ್ಟಿ ಗೊರೂರು ರವರಿಗೆ "ಸೌರಭರತ್ನ ಪ್ರಶಸ್ತಿ -2021" ಕಥಾಬಿಂದು ಪ್ರಕಾಶನ ಮಂಗಳೂರು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಕುಡ್ಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇದರ ಸಹಯೋಗದಲ್ಲಿ, ಕಥಾಬಿಂದು ಪ್ರಕಾಶನದ 14ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಪ್ರಧಾನ ಮಾಡಲಿರುವ ವಿವಿಧ ಪ್ರಶಸ್ತಿ ಗಳಲ್ಲೊಂದಾದ "ಸೌರಭರತ್ನ ಪ್ರಶಸ್ತಿ -2021" ಪ್ರಶಸ್ತಿಗೆ, ಮೂಲತ ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಎಣ್ಣೆಹೊಳೆಯವರಾದ, ಲೇಖಕಿ, ಕವಯಿತ್ರಿ "ರೇಷ್ಮಾ ಶೆಟ್ಟಿ ಗೊರೂರು" ಇವರನ್ನು ಆಯ್ಕೆ ಮಾಡಲಾಗಿದೆ ಎಂದು ಕಥಾಬಿಂದು ಪ್ರಕಾಶನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.ಪ್ರಶಸ್ತಿ ಪ್ರದಾನ ಸಮಾರಂಭವು ಅ.15ರಂದು ಸಂಜೆ 4 ಗಂಟೆಗೆ "ತುಳು ಭವನ ಉರ್ವ ಸ್ಟೋರ್ ಮಂಗಳೂರು"ಇಲ್ಲಿ ಜರುಗಲಿದೆ..
ಜನಮಿಡಿತ ಪತ್ರಿಕೆಯ ಬರಹಗಾರ್ತಿಯಾಗಿರುವ ರೇಷ್ಮಾ ಶೆಟ್ಟಿ ಗೊರೂರು ಅವರ ಚೊಚ್ಚಲ ಕೃತಿ "ಭಾವಜೀವಿಯ ಅಂತರಂಗ "ಕಥಾಬಿಂದು ಪ್ರಕಾಶದ ಮೂಲಕ ಬಿಡುಗಡೆಗೊಂಡಿರುತ್ತದೆ, ಹಾಗೂ ಮುಂದಿನ ಕವನ ಸಂಕಲನ ಪ್ರಕಟಣೆಗೆ ಸಿದ್ದಗೊಂಡಿದೆ..
ವೃತ್ತಿ ಬದುಕಿನ ಜೊತೆ ನಿರಂತರ ಸಾಹಿತ್ಯ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಇವರು "ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಪರಿಷತ್, ಆದಿ ಗ್ರಾಮೋತ್ಸವ ಯುವ ವೃಂದ ಕುರ್ಪಡಿ ಇದರ ಸದಸ್ಯೆ","ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಗೊರೂರು ಘಟಕದ ಸಹಸಂಚಾಲಕಿ", ಹಾಗೂ ಸಹೃದಯ ಸಂಗಮ ಬಳಗ ಸ್ಪಂದನ ಸಿರಿ ವೇದಿಕೆ ಹಾಸನ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಸಾಹಿತ್ಯ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ,
ಅವರಿಗೆ ಈಗಾಗಲೇ ಕಥಾಬಿಂದು ಪ್ರಕಾಶನದಿಂದ "ಚೈತನ್ಯ ಶ್ರೀ "ರಾಜ್ಯ ಪ್ರಶಸ್ತಿ, ಸಪ್ತಸ್ವರ ಸಂಗೀತ ಬಳಗ ಬೆಳಗಾವಿ ಇಲ್ಲಿ ಕೊಡಮಾಡಲ್ಪಡುವ "ಸಿರಿಗನ್ನಡ ರಾಷ್ಟ್ರೀಯ ಸೇವಾ ರತ್ನ "ಪುರಸ್ಕಾರ, ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಪರಿಷತ್ ಹಾಗೂ ಲಯನ್ಸ್ ಕ್ಲಬ್ ಮುನಿಯಾಲು ಇವರ ವತಿಯಿಂದ "ಗ್ರಾಮ ಯುವ ಸಿರಿ ಗೌರವ " ಪುರಸ್ಕಾರಗಳು ಲಭಿಸಿರುತ್ತವೆ..
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.