logo
WhatsApp Image 2026-04-02 at 14.46.04.jpeg
hindalco everlast.jpeg

ರಷ್ಯಾ ಯುಕ್ರೇನ್ ಮೂರನೇ ಮಹಾಯುದ್ಧ ಕ್ಕೆ ಮುನ್ನುಡಿ . ಭಾರತಕ್ಕೆ ಏನು ಪರಿಣಾಮ ಇಲ್ಲಿದೆ ಸಂಪೂರ್ಣ ಮಾಹಿತಿ

ಟ್ರೆಂಡಿಂಗ್
share whatsappshare facebookshare telegram
24 Feb 2022
post image

ಸುದ್ದಿಸಂಚಲನ ಡಿಜಿಟಲ್ ಡೆಸ್ಕ್ : ಪೂರ್ವ ಉಕ್ರೇನ್ ಭಾಗದ ವಿಮಾನ ನಿಲ್ದಾಣಗಳನ್ನು ಉಕ್ರೇನ್ ಬಂದ್ ಮಾಡಿದೆ. ಮಧ್ಯರಾತ್ರಿಯಿಂದ ಯಾವುದೇ ನಾಗರಿಕ ವಿಮಾನಗಳ ಹಾರಾಟಕ್ಕೆ ಅವಕಾಶ ನೀಡಿಲ್ಲ. ರಷ್ಯಾದಿಂದ ಸಂಭಾವ್ಯ ವಾಯುದಾಳಿ ಹಿನ್ನೆಲೆಯಲ್ಲಿ ಉಕ್ರೇನ್ ಸರ್ಕಾರ ಈ ಕ್ರಮ ಕೈಗೊಂಡಿದೆ.

ಯುದ್ಧದ ಸಂಪೂರ್ಣ ಹೊಣೆಯನ್ನು ರಷ್ಯವೇ ಹೊರಬೇಕು ಎಂದು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಹೇಳಿದ್ದಾರೆ.

ಪುಟಿನ್ ಯುದ್ಧ ಘೋಷಣೆ ಪೂರ್ವನಿಯೋಜಿತ. ಈ ಯುದ್ಧದಿಂದ ದುರಂತ ಸಂಭವಿಸಲಿದೆ, ಸಾಕಷ್ಟು ಜೀವಹಾನಿಯಾಗಲಿದೆ. ಈ ದಾಳಿ ತರುವ ಸಾವು-ನೋವಿಗೆ ರಷ್ಯ ಮಾತ್ರ ಹೊಣೆಯಾಗಿರಲಿದೆ.

ಈಗಾಗಲೇ ರಷ್ಯಾ ತನ್ನ ಆಕ್ರಮಣ ನೀತಿ ನಿಲ್ಲಿಸುವಂತೆ ವಿಶ್ವಸಂಸ್ಥೆ ಮನವಿ ಮಾಡಿದೆ. ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳು ರಷ್ಯಾ ಗೆ ಹಲವು ರೀತಿಯಲ್ಲಿ ಆರ್ಥಿಕ ನಿರ್ಬಂಧ ವಿಧಿಸಿವೆ.

ರಷ್ಯಾ ಮಿಲಿಟರಿ ಕಾರ್ಯಾಚರಣೆ ಕ್ರಮಕ್ಕೆ ಯಾವುದೇ ದೇಶ ಹಸ್ತಕ್ಷೇಪ ಮಾಡಿದರೆ, ಎಂದಿಗೂ ಕಂಡಿಲ್ಲದ ಭೀಕರ ಪರಿಣಾಮ ಎದುರಿಸಬೇಕಾದೀತು ಎಂದು ಪುಟಿನ್ ಎಚ್ಚರಿಕೆ ನೀಡಿದ್ದಾರೆ.

ರಶ್ಯಾದ ಐದು ವಿಮಾನಗಳು ಹಾಗೂ ಒಂದು ಹೆಲಿಕಾಪ್ಟರ್ ಅನ್ನು ಪೂರ್ವ ಉಕ್ರೇನ್‌ನಲ್ಲಿ ಹೊಡೆದುರುಳಿಸಲಾಗಿದೆ ಎಂದು ಉಕ್ರೇನ್ ಮಿಲಿಟರಿ ಗುರುವಾರ ಹೇಳಿಕೊಂಡಿದೆ ಎನ್ನುವುದಾಗಿ ಸುದ್ದಿ ಸಂಸ್ಥೆ AFP ವರದಿ ಮಾಡಿದೆ.

ದುಬಾರಿ ದುನಿಯಾ ಕ್ಕೆ ಮುನ್ನುಡಿ: 2014 ರಿಂದ ಮೊದಲ ಬಾರಿಗೆ ಬ್ರೆಂಟ್ ಫ್ಯೂಚರ್ಸ್‌ನಲ್ಲಿ ಪ್ರತಿ ಬ್ಯಾರೆಲ್‌ಗೆ $ 100 ಅನ್ನು ದಾಟಿದೆ, ರಷ್ಯಾದ ಉಕ್ರೇನ್ ಬಿಕ್ಕಟ್ಟು ಬ್ರೆಂಟ್ ತೈಲವು 2014 ರಿಂದ ಮೊದಲ ಬಾರಿಗೆ ಬ್ಯಾರೆಲ್‌ಗೆ $ 100 ಕ್ಕೆ ಏರಿತು.ಇದು ಭಾರತದ ಮೇಲೆ ಕೂಡ ಪರಿಣಾಮ ಬೀರಲಿದೆ ಏಕೆಂದರೆ ಅದು ತನ್ನ ಕಚ್ಚಾ ತೈಲದ ಅವಶ್ಯಕತೆಗಳನ್ನು ಪೂರೈಸಲು ಆಮದುಗಳ ಮೇಲೆ ಅವಲಂಬಿತವಾಗಿದೆ. ಕಚ್ಚಾ ತೈಲ ಬೆಲೆಗಳ ಏರಿಕೆಯು ದೇಶೀಯ ಬೆಲೆಗಳನ್ನು ಹೆಚ್ಚಿಸಬಹುದು, ಇದು ಹಣದುಬ್ಬರಕ್ಕೆ ಕಾರಣವಾಗುತ್ತದೆ. ಕೋವಿಡ್ ಸಾಂಕ್ರಾಮಿಕ ರೋಗವು ಕಡಿಮೆಯಾಗುವುದರೊಂದಿಗೆ, ದೇಶದಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಇತರ ರೀತಿಯ ಇಂಧನಗಳ ಬೇಡಿಕೆಯು ವೇಗವನ್ನು ಪಡೆಯಲಾರಂಭಿಸಿದೆ. ದೇಶದಲ್ಲಿ ಬಳಕೆ ಹೆಚ್ಚಾದರೆ, ಅದು ನೇರವಾಗಿ ದೇಶದ ಆಮದುಗಳನ್ನು ಹೆಚ್ಚಿಸುತ್ತದೆ. ಈ ಕಾರಣದಿಂದಾಗಿ, ಬಜೆಟ್ ಸಹ ತೊಂದರೆಗೊಳಗಾಗಬಹುದು ಮತ್ತು ವಿತ್ತೀಯ ಕೊರತೆಯನ್ನು ನಿಯಂತ್ರಿಸಲಾಗುವುದಿಲ್ಲ

WhatsApp Image 2026-06-24 at 10.46.16 PM.jpeg
WhatsApp Image 2026-06-24 at 10.51.40 PM.jpeg
IMG_5455.jpg.jpeg
Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.