



ಕಾರ್ಕಳ: ಮಾನಸಿಕ ತೊಂದರೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಮನೆಯಲ್ಲಿ ತನ್ನ ತಾಯಿಯೊಂದಿಗೆ ಜಗಳ ಮಾಡಿ ಮನೆಯಿಂದ ಹೊರಟು ಹೋದವರು ನಾಪತ್ತೆಯಾದ ಘಟನೆ ತಾಲ್ಲೂಕಿನ ಸಚ್ಚರಿಪೇಟೆಯಲ್ಲಿ ನಡೆದಿದೆ.
ಸಚ್ಚರಿಪೇಟೆಯ ಕನ್ನಡಿ ಬೆಟ್ಟು ಎಂಬಲ್ಲಿನ ನಿವಾಸಿ ಸತೀಶ (46) ನಾಪತ್ತೆಯಾದವರು. ಕಾಣೆಯಾದ ವ್ಯಕ್ತಿಯ ೫ ಅಡಿ ೬೭ ಇಂಚು ಎತ್ತರ, ಕಪ್ಪು ಮೈಬಣ್ಣ, ಸಾಧಾರಣ ಶರೀರ, ಬೋಳು ತಲೆ, ಮೇಲಿನ ದವಡೆಯ ಎದುರಿನ ಮೇಲಿನ ಹಲ್ಲು ಅರ್ಧ ತುಂಡಾಗಿದ್ದು ಕನ್ನಡ, ತುಳು, ಹಿಂದಿ ಭಾಷೆ ಮಾತನಾಡುತ್ತಾರೆ. ಬಲ ಕೈಯ್ಯಲ್ಲಿ ಕಪ್ಪುದಾರ ಕಟ್ಟಿದ್ದು ಅರ್ಧ ತೋಳಿನ ಬಿಳಿ ಅಂಗಿ, ನೀಲಿ ಬಣ್ಣದ ಬರ್ಮುಡಾ ಧರಿಸಿದ್ದಾರೆ. ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.