



ಕಾರ್ಕಳ :ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು ಮಾಡಿದ ಘಟನೆ ಕಾರ್ಕಳ ತಾಲೂಕಿನ ಶಿರ್ಲಾಲು ಗ್ರಾಮದ ಹಾಡಿಯಂಗಡಿ ಸೂರ್ಯಂತೊಕ್ಲು ಚೆನ್ನಪ್ಪ ಎಂಬವರ ಮನೆಯಲ್ಲಿ ಜೂ.24 ನಡೆದಿದೆ.
. ಜೂ. 24ರಂದು ಸಂಜೆ 4:30 ಗಂಟೆಗೆ ಮನೆಗೆ ಬೀಗ ಹಾಕಿ ಚೆನ್ನಪ್ಪ ಅವರು ಅವರ ಹೆಂಡತಿಯೊಂದಿಗೆ ಮಾಳದಲ್ಲಿರುವ ಮಾವನ ಮನೆಗೆ ತೆರಳಿದ್ದ ವೇಳೆಕಳ್ಳತನ ವಾಗಿದೆ . ಜೂ. 25ರಂದು ಬೆಳಿಗ್ಗೆ 7 ಗಂಟೆಗೆ ಮನೆಗೆ ಬಂದಾಗ ಮನೆಯ ಬಾಗಿಲು ತೆರೆದಿದ್ದು, ಕಳ್ಳರು ಮನೆ ಎದುರಿನ ಬಾಗಿಲಿನ ಚಿಲಕದ ಕೊಂಡಿ ತುಂಡು ಮಾಡಿ ಒಳಗೆ ಪ್ರವೇಶಿಸಿ. ಕೋಣೆಯಲ್ಲಿದ್ದ ಕಪಾಟಿನ ಬಾಗಿಲು ಮುರಿದು ವಸ್ತುಗಳನ್ನು ಜಾಲಾಡಿದ್ದಾರೆ. ಲಾಕರ್ ನಲ್ಲಿದ್ದ 6 ಪವನ್ ತೂಕದ ಕರಿಮಣಿ ಸರ, 5 ಪವನಿನ ಹವಳದ ಚೈನ್, 2 ಪವನಿನ 2 ಜೊತೆ ಉಂಗುರ, 4 ಪವನಿನ ಬ್ರಾಸ್ಕೆಟ್, 4 ಪವನಿನ ಚೈನ್, 1 ಪವನಿನ ಲೇಡಿಸ್ ಉಂಗುರ, 2 ಪವನಿನ ಕಿವಿಯೋಲೆ 2 ಜೊತೆ, 1 ಪವನಿನ ಜಂಟ್ಸ್ ಉಂಗುರ ಸೇರಿದಂತೆ ಒಟ್ಟು 8 ಲಕ್ಷ ರೂ. ಮೌಲ್ಯದ 200 ಗ್ರಾಂ. ಚಿನ್ನ ಕಳವಾಗಿದೆ. 75 ಸಾವಿರ ನಗದು ಕಳ್ಳತನವಾಗಿದೆ. ಈ ಕುರಿತು ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.