



ಶಿರ್ವ: ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ವಿಧಿಸಿರುವ ರಾತ್ರಿ ಕರ್ಫ್ಯೂ ವನ್ನು ಉಲ್ಲಂಘಿಸಿ ಗುಂಪು ಸೇರಿದ್ದ ವ್ಯಕ್ತಿಗಳ ಮೇಲೆ ಪ್ರಕರಣ ದಾಖಲಾದ ಘಟನೆ ಶಿರ್ವ ಠಾಣೆಯಲ್ಲಿ ನಡೆದಿದೆ.
ಶಿರ್ವ ಠಾಣೆಯ ಪೊಲೀಸ್ ಉಪನಿರೀಕ್ಷಕಶ್ರೀಶೈಲ್ ಡಿಎಮ್, ತನ್ನ ಸಿಬ್ಬಂದಿ ಯೊಂದಿಗೆ ರಾತ್ರಿ ರೌಂಡ್ಸ್ ನಲ್ಲಿ ದ್ದಾಗ ಜ.3ರ ಬೆಳಗಿನ ಜಾವ 4.30 ಸಮಯದಲ್ಲಿ ಶಿರ್ವ ಸ್ಯಾಮ್ ಸ್ಕ್ವಾರ್ ಬಳಿ , ಅಸ್ಟನ್, ರಝೀನ್,ಸೋಮನಾಥ,ಅಬ್ದುಲ್ ಸಮಾದ್, ಪ್ರಶಾಂತ್, ಜೀವನ್ ,ಮುನಾಸ್, ಸಮಂಜಸ ಕಾರಣವಿಲ್ಲದೇ ಹಾಗು ಮಾಸ್ಕ್ ಹಾಕದೆ ಅನಗತ್ಯವಾಗಿ ಸ್ಥಳದಲ್ಲಿ ಗುಂಪು ಸೇರಿದ್ದರು . ಬಗ್ಗೆ ಸರಕಾರವು ಹೊರಡಿಸಿರುವ ಕೋವಿಡ್ ಮಾರ್ಗಸೂಚಿಯನ್ನು ನಿರ್ಲಕ್ಷಿತನ ,ಹಾಗೂ ಮಾನ್ಯ ಜಿಲ್ಲಾಧಿಕಾರಿಗಳ ಕರ್ಪ್ಯೂ ಆದೇಶವನ್ನು ಉಲ್ಲಂಘಿಸಿ ದ್ದಾರೆ ಎಂದು ಶಿರ್ವ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.