



ಕಾರ್ಕಳ : ತಾಲೂಕಿನ ನಾಲ್ಕು ಸ್ಥಾನ ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಂದಳಿಕೆ ಆಯಾನೋಸ್ಸವ ಸಿರಿ ಜಾತ್ರಾ ಮಹೋತ್ಸವ ಮತ್ತು ಶ್ರೀ ರಾಶಿ ಪೂಜಾ ಮಹೋತ್ಸವ ಏ.6 ರಂದು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಹಾಗೂ ಮಹಾ ಅನ್ನಸಂರ್ಪಣೆ ಯೊಂದಿಗೆ ವಿಜೃಂಭಣೆಯಿಂದ ನಡೆಯಿತು.
ರಾತ್ರಿ ಘ 9-00 ಕೆ ನಂದಳಿಕೆ ಚಾವಡಿ ಅರಮನೆ ಯಿಂದ ಶ್ರೀ ಹೆಗ್ಡೆಯವರ ಆಗಮನದ ಪರಂಪರಾಗತ ಅದ್ದೂರಿ ಮೆರವಣಿಗೆ ನಂತರ ಅಯಾನೋಸ್ಸವ ,ಬಲಿ,ವೈಭವೋಪೇತ ಕೆರೆ ದೀಪೋತ್ಸವ ನಂತರ ಸತ್ಯದ ಸಿರಿಗಳ ಮೂಲ ಕ್ಷೇತ್ರ ಶ್ರೀ ಆಲಡೆ ಸನ್ನಿಧಾನದಲ್ಲಿ ಶ್ರೀ ಸಿರಿ ಕುಮಾರ ಅಬ್ಬಗ ದಾರಗ , ದರ್ಶನಾವೇಶ ಪೂರ್ವಕ ಸೂರ್ಯೋದಯ ಪರ್ಯಂತ ಸಪ್ತ ಸತ್ಯದ ಸಿರಿಗಳ ನಂದಳಿಕೆ ಸಿರಿ ಜಾತ್ರೆ ಪ್ರಾಚೀನ ವಿಧಿ ವೈಭವಗಳು ,ನಂತರ ಬೇಳ್ಳ ಜಾವ ಬ್ರಹ್ಮ ಮಂಡಲ ಸೇವೆ ,ಬೆಳಗಿನ ಬಲಿ ಭೂತ ಬಲಿ ಇತ್ಯಾದಿ ಕ್ಷೇತ್ರದಲ್ಲಿ ವಿಜೃಂಭಣೆಯಿಂದ ನಡೆಯಿತು ಕ್ಷೇತ್ರದ ಕುರಿತು ಚಾವಡಿ ಅರಮನೆ ಯ ಸುಹಾಸ್ ಹೆಗ್ಡೆ, ಮಾದ್ಯಮಕ್ಕೆ ವಿವರ ನೀಡಿದರು. ಯನ್ .ಸುಂದರರಾಮ ಹೆಗ್ಡೆ ಚಾವಡಿ ಅರಮನೆ ಅನುವಂಶಿಕ ಆಡಳಿತ ಮೊಕ್ತೇಸರ ರು ನಂದಳಿಕೆ, ಶ್ರೀ ಮಹಾಲಿಂಗೇಶ್ವರ ದೇವಾಲಯ ನಾಲ್ಕು ಸ್ಥಾನ ನಂದಳಿಕೆ ಹಾಗೂ ಕೆದಿಂಜೆ ,ನಂದಳಿಕೆ ಗ್ರಾಮಸ್ಥರು ಸ್ವಯಂ ಸೇವಕರು , ಊರ ಪರ ಊರ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು ಶ್ರೀ ಮಹಾಲಿಂಗೇಶ್ವರ ದೇವರ ಗಂಧ ಪ್ರಸಾದ ಸ್ವೀಕರಿಸಿ ಪುನೀತರಾದರು .
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.