logo
WhatsApp Image 2026-04-02 at 14.46.04.jpeg
hindalco everlast.jpeg

ರಾಜ್ಯ ಮಟ್ಟದ ಆರ್ಮ್ ರಸ್ಟ್ಲಿಂಗ್ ಸ್ಪರ್ಧೆ: ಬೈಲೂರಿನ ಸುಜಿತ್ ನಾಯಕ್ ಗೆ ಚಿನ್ನದ ಪದಕ

ಟ್ರೆಂಡಿಂಗ್
share whatsappshare facebookshare telegram
22 Mar 2023
post image

ಕಾರ್ಕಳ: ಹಾಸನದಲ್ಲಿ ಇತ್ತೀಚೆಗೆ ನಡೆದ ಆರ್ಮ್ ರಸ್ಟ್ಲಿಂಗ್(ಪಂಜ ಕುಸ್ತಿ) ಸ್ಪರ್ಧೆಯಲ್ಲಿ ಕಾರ್ಕಳ ತಾಲೂಕಿನ ನೀರೆ ಬೈಲೂರಿನ ಯುವಕ ಸುಜಿತ್ ನಾಯಕ್ ಚಿನ್ನದ ಪದಕ ಪಡೆದು ಅತ್ಯುತ್ತಮ ಸಾಧನೆ ಮಾಡಿದ್ದಾರೆ.

ಸುಜಿತ್ ನಾಯಕ್ ಮುಂದಿನ ತಿಂಗಳಲ್ಲಿ ಜಮ್ಮು ಕಾಶ್ಮೀರದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಪಂಜ‌ ಕುಸ್ತಿ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.

ಸುಜಿತ್ ನಾಯಕ್ (25 ವರ್ಷ) ಅವರು ಸುಧಾಕರ್ ನಾಯಕ್ ಮತ್ತು ಜ್ಯೋತಿ ನಾಯಕ್ ಅವರ ಮಗನಾಗಿದ್ದು, ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ನೀರೆಬೈಲೂರು ಶಾಲೆಯಲ್ಲಿ ಪಡೆದಿರುತ್ತಾರೆ.

ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಸುಜಿತ್ ಅವರನ್ನು ನೀರೆ ಬೈಲೂರಿನ ಗ್ರಾಮಸ್ಥರು ಶುಭಹಾರೈಸಿದ್ದಾರೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.