



ಕಾರ್ಕಳ : ಎಣ್ಣೆಹೊಳೆ ಏತ ನೀರಾವರಿ ಯೋಜನೆಯ ಕಾಮಗಾರಿಯನ್ನು ಇಂಧನ ಮತ್ತುಕನ್ನಡ ಸಂಸ್ಕೃತಿ ಸಚಿವ ವಿ. ಸುನೀಲ್ ಕುಮಾರ್ ವೀಕ್ಷಣೆ ಮಾಡಿದರು. ಈಸಂದರ್ಭದಲ್ಲಿ ಜ.೫ ರೊಳಗೆ ಏತ ನೀರಾವರಿ ಯೋಜನೆಯ ಅಣೆಕಟ್ಟುವಿನ ಗೇಟ್ ಅಳವಡಿಸಿ ನೀರು ಸಂಗ್ರಹ ಮಾಡುವಂತೆ ಸೂಚಿಸಿದರು. ಜನವರಿ ಅಂತ್ಯದೊಳಗೆ ಪ್ರಾಯೋಗಿಕ ನೀರು ಪೂರೈಕೆ ಮಾಡುವಂತೆ ಹಾಗು ಯೋಜನೆಯ ಸಂಪೂರ್ಣ ಮಾಹಿತಿಯನ್ನು ಸ್ಥಳೀಯರಿಗೆ ನೀಡುವ ಸಲುವಾಗಿ ಜನವರಿ ಮೊದಲ ವಾರದಲ್ಲಿ ಸಭೆ ಕರೆಯುವಂತೆೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಇದೇ ಸಂದರ್ಭದಲ್ಲಿ ಮರ್ಣೆ ಗ್ರಾಮ.ಪಂ ಅದ್ಯಕ್ಷೆ ಜ್ಯೋತಿ ಪೂಜಾರಿ , ಎ.ಪಿ.ಎಂ.ಸಿ ಅಧ್ಯಕ್ಷ ರತ್ನಾಕರ್ ಅಮೀನ್ , ಸ್ಥಳಿಯರಾದ ನಂದಕುಮಾರ್ ಹೆಗ್ಡೆ , ಅರುಣ್ ಭಟ್ ಹೆಗ್ಡೆ. , ಗೌತಂ ನಾಯಕ್ ,ನವೀನ್ ನಾಯಕ್ , ಉಪಸ್ಥಿತರಿದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.