



ಕಾರ್ಕಳ:ಭಾರತೀಯ ಜನತಾ ಪಾರ್ಟಿ ಇದರ ವತಿಯಿಂದ ಸೇವೆ ಮತ್ತು ಸಮರ್ಪಣಾ ಅಭೀಯಾನದ ಅಂಗವಾಗಿ ಅಕ್ಟೋಬರ್ ೬ರಂದು ಜೋಡುರಸ್ತೆಯ ಪೈಮ್ ಮಾಲ್ನಲ್ಲಿ ಖಾದಿಭಂಡಾರ ಮತ್ತು ಪ್ರದರ್ಶನ ಮೇಳ ನಡೆಯಿತು. ಸಚಿವ ವಿ.ಸುನೀಲ್ ಕುಮಾರ್ರವರು ಕಾರ್ಯಕ್ಷೇತ್ರಕ್ಕೆ ಚಾಲನೆ ನೀಡಿ ಖಾದಿಗೆ ಉತ್ತೇಜನ ನೀಡುವ ಹಾಗೂ ಆರೋಗ್ಯ ದೃಷ್ಟಿಯಿಂದ ಖಾದಿ ವÀಸ್ತç ಉಪಯೋಗವಾಗಬೇಕು ಮತ್ತು ಈ ನಿಟ್ಟಿನಲ್ಲಿ ಖಾದಿ ಖರೀದಿ ಮಾಡಬೇಕೆಂದರು. ಈ ಸಂದರ್ಭದಲ್ಲಿ ಉದ್ಯಮಿ ಬೋಳ ಪ್ರಭಾಕರ್ ಕಾಮತ್, ಹಿರಿಯ ನ್ಯಾಯವಾದಿ ಎಂ.ಕೆ ವಿಜಯ್ ಕುಮಾರ್, ರಾಜ್ಯ ಗೇರು ನಿಗಮದ ಅಧ್ಯಕ್ಷರಾದ ಮಣಿರಾಜ್ ಶೆಟ್ಟಿ ಬಿಜಿಪಿ ಮಂಡಲ ಅಧ್ಯಕ್ಷ ಮಹಾವೀರ್ ಹೆಗ್ಡೆ, ತಾಲೂಕು ಪ್ರಧಾನ ಕಾರ್ಯದರ್ಶಿ ನವೀನ್ ನಾಯಕ್, ಜಯರಾಮ್ ಸಾಲ್ಯಾನ್, ಪಕ್ಷದ ವಕ್ತಾರ ಕೆ.ಎಸ್. ಹರೀಶ್ ಶೆಣೈ, ನಗರ ಬಿಜೆಪಿ. ಅಧ್ಯಕ್ಷ ರವೀಂದ್ರ ಮೊÊಲಿ, ತಾಲೂಕು ಕಾರ್ಯದರ್ಶಿ ಅನಂತಕೃಷ್ಣ ಶೆಣೈ, ಪೂರ್ಣಿಮಾ ಸಂಸ್ಥೆಯ ರವಿಪ್ರಕಾಶ್ ಪ್ರಭು, ಪುರಸಭಾ ಅಧ್ಯಕ್ಷೆ ಸುಮಾ ಕೇಶವ್, ಪುರಸಭಾ ಸದಸ್ಯರು, ಕುಕ್ಕುಂದೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶಶಿಮಣಿ, ಪಂಚಾಯತ್ ಸದಸ್ಯರು ಪಕ್ಷದ ಪಧಾದಿಕಾರಿ ಗಳು, ಪ್ರಮುಖರು ಉಪಸ್ಥಿತರಿದ್ದರು ಜಿಲ್ಲಾ ಕಾರ್ಯದರ್ಶಿಗಳಾದ ರೇಶ್ಮಾ ಉದಯ ಶೆಟ್ಟಿ ಸ್ವಾಗತಿಸಿ, ರವೀಂದ್ರ ಕುಮಾರ್ ನಿರೂಪಿಸಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.