



ಭಾಗ್ಯನದಿಗೆ ಬಾಗಿನ ಅರ್ಪಣೆ
*ಸ್ವರ್ಣೆಗೆ ಸಚಿವ ಸುನಿಲ್ ದಂಪತಿಯಿಂದ ಪೂಜೆ ಉಡುಪಿ: ಉಡುಪಿಯ ಜೀವನದಿ ಸುವರ್ಣೆಗೆ ಬಾಗಿನ ಅರ್ಪಿಸುವ ಕಾರ್ಯಕ್ರಮ ಶೀಂಬ್ರ ಸಿದ್ಧಿವಿನಾಯಕಮ ದೇವಸ್ಥಾನದ ಬಳಿ ಕೃಷ್ಣಾಂಗಾರಕ ಸ್ನಾನಘಟ್ಟ ದಲ್ಲಿ ವಿಧಿವತ್ತಾಗಿ ನೆರವೇರಿತು . ಸ್ವರ್ಣೆಗೆ ಸಚಿವ ಸುನಿಲ್ ದಂಪತಿಯಿಂದ ಪೂಜೆ ಉಡುಪಿಯ ಜೀವನದಿ ಸುವರ್ಣೆಗೆ ಬಾಗಿನ ಅರ್ಪಿಸುವ ಕಾರ್ಯಕ್ರಮ ಶೀಂಬ್ರ ಸಿದ್ಧಿವಿನಾಯಕಮ ದೇವಸ್ಥಾನದ ಬಳಿ ಕೃಷ್ಣಾಂಗಾರಕ ಸ್ನಾನಘಟ್ಟ ದಲ್ಲಿ ವಿಧಿವತ್ತಾಗಿ ನೆರವೇರಿತು . ಉಡುಪಿಯ ಜೀವನದಿ ಸುವರ್ಣೆಗೆ ಬಾಗಿನ ಅರ್ಪಿಸುವ ಕಾರ್ಯಕ್ರಮ ಶೀಂಬ್ರ ಸಿದ್ಧಿವಿನಾಯಕಮ ದೇವಸ್ಥಾನದ ಬಳಿ ಕೃಷ್ಣಾಂಗಾರಕ ಸ್ನಾನಘಟ್ಟ ದಲ್ಲಿ ವಿಧಿವತ್ತಾಗಿ ನೆರವೇರಿತು . ಉಡುಪಿಯ ಜೀವನದಿ ಸುವರ್ಣೆಗೆ ಬಾಗಿನ ಅರ್ಪಿಸುವ ಕಾರ್ಯಕ್ರಮ ಶೀಂಬ್ರ ಸಿದ್ಧಿವಿನಾಯಕಮ ದೇವಸ್ಥಾನದ ಬಳಿ ಕೃಷ್ಣಾಂಗಾರಕ ಸ್ನಾನಘಟ್ಟ ದಲ್ಲಿ ವಿಧಿವತ್ತಾಗಿ ನೆರವೇರಿತು . ಜಿಲ್ಲಾಡಳಿತ ಮತ್ತು ಉಡುಪಿ ನಗರ ಸಭೆಗಳ ಜಂಟಿ ಆಶ್ರಯದಲ್ಲಿ ಕಾರ್ಯಕ್ರಮ ನೆರವೇರಿತು .
ಜಿಲ್ಲಾ ಉಸ್ತುವಾರಿ ಮತ್ರು ರಾಜ್ಯ ಇಂಧನ ಕನ್ನಡ ಸಂಸ್ಕೃತಿ ಮಂತ್ರಿ ವಿ ಸುನಿಲ್ ಕುಮಾರ್ , ಪತ್ನಿ ಪ್ರಿಯಾಂಕ ಸಹಿತರಾಗಿ ಬಂದು ಜಿಲ್ಲೆಯ ಜನತೆಯ ಪರವಾಗಿ ತಲೆಗೆ ಮುಂಡಾಸು ತೊಟ್ಟು ಯಜಮಾನಿಕೆ ಸ್ವೀಕರಿಸಿ ಸಂಕಲ್ಪ ನೆರವೇರಿಸಿ ಬಾಗಿನ ಅರ್ಪಿಸಿ ಮಂಗಳಾರತಿ ಗೈದರು . ಸುವರ್ಣೆಗೆ ಹಾಲುಬ, ಗಂಧೋದಕ , ಅರಶಿನ ಕುಂಕುಮ , ರಜತ ಮಾಂಗಲ್ಯ , ಪುಷ್ಪ , ಸೀರೆ , ಲಡ್ಡು , ತಾಂಬೂಲ ದಕ್ಷಿಣೆಗಳನ್ನು ಸಚಿವರು ಅರ್ಪಿಸಿದರು .
ಆಚಂದ್ರಾರ್ಕ ಜಿಲ್ಲೆಯ ಸುಭಿಕ್ಷೆ ಸಮೃದ್ಧಿಯನ್ನು ಕಾಪಾಡುವಂತೆ ಜೀವನದಿಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು .
ಶಾಸಕ ರಘುಪತಿ ಭಟ್ ದಂಪತಿ ಜಿಲ್ಲಾಧಿಕಾರಿ ಕೂರ್ಮರಾವ್ , ಎಸ್ ಪಿ ವಿಷ್ಣುವರ್ಧನ್ ಎಡಿಸಿ ಸದಾಶಿವ ಪ್ರಭು , ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ , ನಗರಸಭಾಧ್ಯಕ್ಷೆ ಸುಮಿತ್ರಾ ನಾಯಕ್ ,ಉಪಾಧ್ಯಕ್ಷೆ ಲಕ್ಷ್ಮಿ ಮಂಜುನಾಥ , ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ , ಸ್ಥಾಯೀ ಸಮಿತಿ ಅಧ್ಯಕ್ಷ ಗಿರೀಶ್ ಅಂಚನ್ , ಆಯುಕ್ತ ಉದಯ ಶೆ್ಟ್ಟಿ , ಸಣ್ಣ ನೀರಾವರಿ ಇಲಾಖೆ ಸಹಾಯಕ ಅಭಿಯಂತ ಶೇಷ ಕೃಷ್ಣ , ಜಿಲ್ಲಾ ಬಿಜೆಪಿ ಅಧ್ಯಕ್ಷ ಸುರೇಶ್ ನಾಯಕ್ , ಸ್ಥಳೀಯ ನಗರಸಭಾಸದಸ್ಯೆ ಅರುಣಾ ಸುಧಾಮ , ಅರ್ಚಕ ನವೀನ್ ಶಿವತ್ತಾಯ , ನಗರಸಭಾ ಸದಸ್ಯರುಗಳು ಅಧಿಕಾರಿಗಳು ಉಪಸ್ಥಿತರಿದ್ದರು , ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಹೆರ್ಗ ಹರಿಪ್ರಸಾದ್ ಭಟ್ , ಪೂಜಾವಿಧಿ ನೆರವೇರಿಸಿದರು . ಗಣಪತಿ ಭಟ್ ಡೆನಿಸ್ ಡಿಸೋಜ , ನಾಗರಾಜ್ ಶಿವತ್ತಾಯ ಸಹಕರಿಸಿದರು .ವಾಸುದೇವ ಭಟ್ ಪೆರಂಪಳ್ಳಿ ಕಾರ್ಯಕ್ರಮ ಸಂಯೋಜಿಸಿ ಸ್ಥಳದ ಪ್ರಾಚೀನ ಹಿನ್ನೆಲೆಯನ್ನು ವಿವರಿಸಿದರು .
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.