



ಕುಂದಾಪುರ: ತಾಲೂಕಿನ ತ್ರಾಸಿ ಪ್ರವಾಸಿ ಮಂದಿರದ ಬಳಿ ಬೀಚ್ನಲ್ಲಿ ಗಾಂಜಾ ಸೇವಿಸುತ್ತಿದ್ದ ಮೂವರು ಯುವಕರನ್ನು ಗಂಗೊಳ್ಳಿ ಪೊಲೀಸರು ಆ.27ರಂದು ಬಂಧಿಸಿದ್ಧಾರೆ. ಸ್ಥಳೀಯ ನಿವಾಸಿಗಳಾದ ಮೊಹಮ್ಮದ್ ರಿಹಾಬ್ಸಾದಾ, ಮೊಹಮ್ಮದ್ದಾನಿಶ್ ಹಾಗೂ ಮೊಹಮ್ಮದ್ ಅರ್ಬಾಜ್ ಬಂಧಿತ ಆರೋಪಿಗಳು. ಇವರು ತ್ರಾಸಿ ಪ್ರವಾಸಿ ಮಂದಿರದ ಬೀಚ್ ಬಳಿ ಗಾಂಜಾ ಸೇವಿಸಿದಂತೆ ಕಂಡುಬಂದಿದ್ದು, ಪೊಲೀಸರು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ವರದಿಯಲ್ಲಿ ಮೂವರು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.