



ಕರಾವಳಿ: ಇಷ್ಟು ದಿನ ಬರೀ ಹೆಸರಿನಲ್ಲಿಯೇ ಸದ್ದು ಮಾಡುತ್ತಿದ್ದ “ದಸ್ಕತ್”ಹೆಸರಿನ ತುಳು ಚಿತ್ರ ಇದೀಗ ತೆರೆಗೆ ಅಪ್ಪಳಿಸಲು ಸಿದ್ದವಾಗಿದೆ. ದಸ್ಕತ್ ತುಳುಚಿತ್ರ ಡಿಸೆಂಬರ್ 13 ರಂದು ತೆರೆ ಕಾಣಲಿದೆ. ಬಹು ನಿರೀಕ್ಷೆಯನ್ನು ಮೂಡಿಸಿರುವ ಈ ತುಳು ಚಿತ್ರ ಕಾಮಿಡಿ ಕಿಲಾಡಿಗಳು ಶೋನ ಕಲಾವಿದ ಅನೀಶ್ ಕುಮಾರ್ ವೇಣೂರು ನಿರ್ದೇಶನದಲ್ಲಿ ಈ ಚಿತ್ರ ನಿರ್ಮಾಣಗೊಂಡಿದೆ.
ಅಂದ ಹಾಗೆ ಈ ಸಿನಿಮಾದಲ್ಲಿ ಕನ್ನಡ ಚಲನಚಿತ್ರ ನಟ ಮೋಹನ್ ಶೇಣಿ, ಸಿರಿಯಲ್ ನಟಿ ಭವ್ಯ ಪೂಜಾರಿ, ಹಾಸ್ಯ ನಟ ದೀಪಕ್ ರೈ ಪಾಣಾಜೆ ಸೇರಿದಂತೆ ಹಲವು ಹಿರಿಯ ಮತ್ತು ಹೊಸ ಮುಖಗಳು ಈ ಚಿತ್ರದಲ್ಲಿ ನಟಿಸಿದ್ದಾರೆ. ದಸ್ಕತ್ ಸಿನಿಮಾವು ಉಡುಪಿ ಮತ್ತು ದಕ್ಷಿಣಕನ್ನಡ ಜಿಲ್ಲೆಯಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ. ಬದುಕು, ಸಂಸ್ಕೃತಿ ಸಂಘರ್ಷವನ್ನು ಹೊತ್ತುಕೊಂಡಿರುವ ಈ ಸಿನಿಮಾ ಭರ್ಜರಿಯಾಗಿ ಚಿತ್ರೀಕರಣ ಮುಗಿಸಿದ್ದು, ನೀವು ತುಳು ಚಿತ್ರಗಳ ಅಭಿಮಾನಿಗಳಾಗಿದ್ದಲ್ಲಿ ಡಿಸೆಂಸರ್ 13 ರಂದು ನೋಡಲು ಮರೆಯದಿರಿ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.