



ಮಲ್ಪೆ : ಉಡುಪಿ ಯ ಮಲ್ಪೆ ಬಂದರಿನ ಆಳ ಸಮುದ್ರ ಸಹಕಾರಿ ಸಂಘದ ಮಂಜುಗಡ್ಡೆ ಸ್ಥಾವರದ ಮಿಶನರಿಗಳನ್ನು ರಿಪೇರಿ ಮಾಡುತ್ತಿರುವಾಗ ಆಕಸ್ಮಿಕವಾಗಿ ವಿದ್ಯುತ್ ತಗುಲಿ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೆ ಆ.25ರಂದು ಮೃತಪಟ್ಟಿದ್ದಾರೆ. ಮಲ್ಪೆ ಪಂಚಾಯತ್ ಆಫೀಸ್ ಬಳಿಯ ನಿವಾಸಿ 51 ವರ್ಷದ ಸುದೇಶ್ ಎನ್. ಕರ್ಕೇರಾ ಮೃತದುರ್ದೈವಿ. ಇವರು ಜುಲೈ 9ರಂದು ಮಂಜುಗಡ್ಡೆ ಸ್ಥಾವರದ ಮಿಶನರಿಗಳನ್ನು ರಪೇರಿ ಮಾಡುತ್ತಿರುವಾಗ ಆಕಸ್ಮಿಕವಾಗಿ ವಿದ್ಯುತ್ ತಗುಲಿದ ಪರಿಣಾಮ ಸುದೇಶ್ ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಉಡುಪಿ ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಜೀವನ್ಮಾರಣ ಹೋರಾಟದಲ್ಲಿದ್ದ ಸುದೇಶ್ ಕೊನೆಯುಸಿರೆಳೆದಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.