logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಉಡುಪಿ: ಬೆಳೆ ವಿಮೆ ಯೋಜನೆಯ ಲಾಭ ಪಡೆಯಲು ಆಧಾರ್ ಜೋಡಣೆಯ ತಾಂತ್ರಿಕ ಸಮಸ್ಯೆ ಸರಿಪಡಿಸಿಕೊಳ್ಳಿ

ಟ್ರೆಂಡಿಂಗ್
share whatsappshare facebookshare telegram
4 Dec 2023
post image

ಉಡುಪಿ: ತೋಟಗಾರಿಕೆ ಇಲಾಖೆಯ ವತಿಯಿಂದ 2022-23 ನೇ ಸಾಲಿನ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿ ಬೈಂದೂರು ತಾಲೂಕಿನ 12 ಗ್ರಾಮದಲ್ಲಿ ಅಡಿಕೆ ಬೆಳೆಯ 1064 ಪ್ರಕರಣಗಳಿಗೆ 380.72 ಲಕ್ಷ ರೂ., ಕಾಳುಮೆಣಸು ಬೆಳೆಯ 423 ಪ್ರಕರಣಗಳಿಗೆ 49.37 ಲಕ್ಷ ರೂ., ಕುಂದಾಪುರ ತಾಲೂಕಿನ 26 ಗ್ರಾಮದಲಿ ಅಡಿಕೆ ಬೆಳೆಯ 3322 ಅಡಿಕೆ ಪ್ರಕರಣಗಳಿಗೆ 915 ಲಕ್ಷ ರೂ., ಕಾಳುಮೆಣಸು ಬೆಳೆಯ 833 ಪ್ರಕರಣಗಳಿಗೆ 110 ಲಕ್ಷ ರೂ., ಹೆಬ್ರಿ ತಾಲೂಕಿನ ಬೆಳ್ವೆ ಮತ್ತು ಮಡಾಮಕ್ಕಿ ಗಾಮಗಳಲ್ಲಿ ಅಡಿಕೆ ಬೆಳೆಯ 83 ಪ್ರಕರಣಗಳಿಗೆ 34.49 ಲಕ್ಷ ರೂ., ಕಾಳುಮೆಣಸು ಬೆಳೆಯ 7 ಪ್ರಕರಣಗಳಿಗೆ 1.44 ಲಕ್ಷ ರೂ., ಒಟ್ಟು ಅಡಿಕೆ ಬೆಳೆಯ 4469 ಪ್ರಕರಣಗಳಿಗೆ 1130.28 ಲಕ್ಷ ರೂ. ಹಾಗೂ ಕಾಳುಮೆಣಸು ಬೆಳೆಯ 1262 ಪ್ರಕರಣಗಳಿಗೆ 161.59 ಲಕ್ಷ ರೂ. ಸೇರಿದಂತೆ 5731 ಪ್ರಕರಣಗಳಿಂದ 1491.87 ಲಕ್ಷ ರೂ. ಗಳು ಪರಿಹಾರ ರೈತರ ಖಾತೆಗೆ ಪಾವತಿಯಾಗಿರುತ್ತದೆ.   ಆಧಾರ್ ಜೋಡಣೆಯ ತಾಂತ್ರಿಕ ಸಮಸ್ಯೆಯಿಂದಾಗಿ ಒಟ್ಟು 82 ಪ್ರಕರಣಗಳಲ್ಲಿ 28.92 ಲಕ್ಷ ರೂ. ರೈತರ ಖಾತೆಗಳಿಗೆ ಪರಿಹಾರ ಪಾವತಿ ವಿಫಲವಾಗಿದ್ದು, ರೈತರು ಆಧಾರ್ ಜೋಡಣೆಯ ತಾಂತ್ರಿಕ ಸಮಸ್ಯೆಗಳನ್ನು ವಿಮಾ ಕಂತನ್ನು ಪಾವತಿಸಿದ ಬ್ಯಾಂಕ್ ಖಾತೆಗಳಿಗೆ ಭೇಟಿ ನೀಡಿ ಸರಿಪಡಿಸಿಕೊಳ್ಳುವಂತೆ ತೋಟಗಾರಿಕೆ ಇಲಾಖೆಯ ಕುಂದಾಪುರ ತಾಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.