



ಉಡುಪಿ: ಬಹು ನಿರೀಕ್ಷಿತ “ಶಕಲಕ ಬೂಂಬೂಂ’ ತುಳು ಚಲನಚಿತ್ರದ ಬಿಡುಗಡೆ ಕಾರ್ಯಕ್ರಮ ನಗರದ ಕಲ್ಪನಾ ಥಿಯೇಟರ್ನಲ್ಲಿ ಶುಕ್ರವಾರ ನಡೆಯಿತು. ಮೀನು ಮಾರಾಟ ಹಾಗೂ ಒಕ್ಕೂಟ ಅಧ್ಯಕ್ಷ ಮುಖಂಡ ಯಶ್ಪಾಲ್ ಎ. ಸುವರ್ಣ ಶುಭಹಾರೈಸಿದರು . ನಿತ್ಯಾನಂದ ನಾಯಕ್ ನರಸಿಂಗೆ ಪ್ರಾಸ್ತಾವಿಕ ಮಾತನಾಡಿದರು
ವಸಂತ ಪೈ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಶ್ರೀಶ ನಾಯಕ್ ಪೆರ್ಣಂಕಿಲ, ಚಿತ್ರದ ನಿರ್ಮಾಪಕ ಉಮೇಶ್ ಪ್ರಭು ಮಾಣಿಬೆಟ್ಟು, ನಿರ್ದೇಶಕ ಶ್ರೀಶ ಎಳ್ಳಾರೆ, ನಾಯಕ ನಟ ಗಾಡ್ವಿನ್ ಸ್ಪಾರ್ಕಲ್, ನಟರಾದ ರಾಜೇಶ್ವರಿ ಕುಲಾಲ್, ವಸಂತ್ ಮುನಿಯಾಲು, ಪ್ರವೀಣ್ ಜಿ. ಆಚಾರ್ಯ, ಪ್ರವೀಣ್ ಮರ್ಕಮೆ, ಬಾಲನಟಿ ತನಿಷಾ ಕಾರ್ಕಳ ಮೊದಲಾದವರು ಉಪಸ್ಥಿತರಿದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.