logo
WhatsApp Image 2026-04-02 at 14.46.04.jpeg
hindalco everlast.jpeg

ಉಡುಪಿ: ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಯಾಣ: 5 ಮಂದಿಗೆ ಜೈಲು ಶಿಕ್ಷೆ

ಟ್ರೆಂಡಿಂಗ್
share whatsappshare facebookshare telegram
14 Oct 2022
post image

ಉಡುಪಿ: ಮಂಗಳೂರಿನಿಂದ ಮುಂಬೈಗೆ ತೆರಳುತಿದ್ದ ಮತ್ಸ್ಯಗಂಧ ಎಕ್ಸ್‌ಪ್ರೆಸ್ ರೈಲಿನಲ್ಲಿ ಟಿಕೆಟ್ ಇಲ್ಲದೇ ಪ್ರಯಾಣಿಸುತಿದ್ದ ಕೇರಳದ ಐವರು ಯುವಕರಿಗೆ ಉಡುಪಿಯ ಜೆಎಂಎಫ್‌ಸಿ ನ್ಯಾಯಾಲಯ ತಲಾ 1100 ರೂ. ದಂಡ ಹಾಗೂ ಒಂದು ತಿಂಗಳ ಸಾದಾ ಜೈಲು ಶಿಕ್ಷೆಯನ್ನು ವಿಧಿಸಿದ್ದು, ದಂಡ ಪಾವತಿಸದಿದ್ದರೆ ಇನ್ನೂ ಒಂದು ತಿಂಗಳು ಜೈಲಿನಲ್ಲಿರುವಂತೆ ಸೂಚಿಸಿ ತೀರ್ಪು ನೀಡಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ. ಮೋಜಿನ ಪ್ರವಾಸಕ್ಕೆಂದು ಹೊರಟು ಶಿಕ್ಷೆಗೊಳಗಾದ ಐವರು ಯುವಕರನ್ನು  ಜುನೈದ್ (24), ಸುಜಿತ್ (23), ವಿಷ್ಣು (24), ಯೂನಿಸ್ (24) ಹಾಗೂ ಮಿಸ್ಬಾ (24) ಎಂದು ಗುರುತಿಸಲಾಗಿದೆ. ಇವರೆಲ್ಲರೂ ಕಲ್ಲಿಕೋಟೆ ಜಿಲ್ಲೆಯ ಥರಿಯಾದ್ ಕಟ್ಟಿಪಾರಾದವರೆಂದು ತಿಳಿದುಬಂದಿದೆ. ಐವರು ಯುವಕರು ಕೇರಳ ರಾಜ್ಯದವರಾಗಿದ್ದು, ಗೋವಾಕ್ಕೆ ಪ್ರವಾಸ ಕೈಗೊಂಡಿದ್ದರು. ರೈಲಿನಲ್ಲಿ ಮಂಗಳೂರಿನಿಂದ ಟಿಕೇಟ್ ಇಲ್ಲದೇ ಪ್ರಯಾಣಿಸುತಿದ್ದ ಇವರು, ಟಿಕೆಟ್ ಕೇಳಿದ ಟಿಸಿಗೆ ದಬಾಯಿಸಿದಲ್ಲದೇ ರೈಲಿನಲ್ಲಿ ನ್ಯೂಸೆನ್ಸ್ ಸೃಷ್ಟಿದ್ದರೆಂದು ಬಂದ ಮಾಹಿತಿಯಂತೆ ರೈಲ್ವೆ ಪೊಲೀಸ್ ಪಡೆಯ ಎಎಸ್‌ಐ ಸುಧೀರ್ ಶೆಟ್ಟಿ ಹಾಗೂ ಮಹಿಳಾ ಕಾನ್‌ಸ್ಟೇಬಲ್ ಝೀನಾ ಪಿಂಟೊ ಉಡುಪಿ ರೈಲ್ವೆ ನಿಲ್ದಾಣದಲ್ಲಿ ಎಲ್ಲಾ ಐವರನ್ನು ವಶಕ್ಕೆ ಪಡೆದು ವಿಚಾರಣೆಗಾಗಿ ಉಡುಪಿ ಆರ್‌ಪಿಎಫ್ ಕಚೇರಿಗೆ ಕರೆದುಕೊಂಡು ಹೋಗಿದ್ದರು. ಆರ್‌ಪಿಎಫ್ ಕಚೇರಿಯಲ್ಲಿ ಮತ್ತಷ್ಟು ಕೆಟ್ಟದ್ದಾಗಿ ವರ್ತಿಸಿದ ಐವರು ವಿದ್ಯಾರ್ಥಿಗಳು, ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆ ಕೆಟ್ಟ ಪದಗಳಿಂದ ಹರಿಹಾಯ್ದರೆಂದು ಹೇಳಲಾಗಿದೆ. ಇದರಿಂದ ಪೊಲೀಸರು ಐವರ ವಿರುದ್ಧ ಆರ್‌ಸಿ ಕಾಯ್ದೆಯಡಿ ಮೊಕದ್ದಮೆಯನ್ನು ದಾಖಲಿಸಿದ್ದಲ್ಲದೇ ಎಲ್ಲರನ್ನೂ ಉಡುಪಿಯ ಜೆಎಂಎಫ್‌ಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಐವರ ವಿರುದ್ಧ ಟಿಕೇಟ್ ರಹಿತ ಪ್ರಯಾಣಕ್ಕಾಗಿ ತಲಾ 1000ರೂ. ದಂಡ ಹಾಗೂ ಕೆಟ್ಟ ವರ್ತನೆಗಾಗಿ ತಲಾ 100 ರೂ.ನಂತೆ ದಂಡ ವಿಧಿಸಿದರು.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.